ಮಾವನ ಕೊಂದ ಸೊಸೆಗೆ 4 ವರ್ಷ ಜೈಲು, ₹10 ಸಾವಿರ ದಂಡ

KannadaprabhaNewsNetwork |  
Published : Mar 29, 2024, 12:46 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಕೆಟ್ಟ ದೃಷ್ಟಿಯಿಂದ ನೋಡುತ್ತಾನೆಂದು ತನ್ನ ಮಾವನ ಮೇಲೆಯೇ ಬಿಸಿನೀರು, ಕಾರದ ಪುಡಿ ಎರಚಿ, ವೇಲ್‌ನಿಂದ ಬಿಗಿದು, ಒನಕೆಯಿಂದ ತಲೆ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿದ್ದ ಸೊಸೆ ಅಪರಾಧಿ ಎಂದು ಸಾಬೀತಾಗಿದ್ದು, 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯಲ್ಲಿ ತೀರ್ಪು ನೀಡಿದೆ.

- ಮಲಗಿದ್ದವವ ಮೇಲೆ ಬಿಸಿನೀರು, ಕಾರದಪುಡಿ ಚೆಲ್ಲಿದ್ದಳು

- ವೇಲ್‌ನಲ್ಲಿ ಬಿಗಿದು, ಒನಕೆಯಿಂದ ಹೊಡೆದು ಕೊಲೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೆಟ್ಟ ದೃಷ್ಟಿಯಿಂದ ನೋಡುತ್ತಾನೆಂದು ತನ್ನ ಮಾವನ ಮೇಲೆಯೇ ಬಿಸಿನೀರು, ಕಾರದ ಪುಡಿ ಎರಚಿ, ವೇಲ್‌ನಿಂದ ಬಿಗಿದು, ಒನಕೆಯಿಂದ ತಲೆ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿದ್ದ ಸೊಸೆ ಅಪರಾಧಿ ಎಂದು ಸಾಬೀತಾಗಿದ್ದು, 4 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹರಿಹರದ ವಿದ್ಯಾನಗರ 4ನೇ ತಿರುವು, 3ನೇ ಮುಖ್ಯ ರಸ್ತೆ ನಿವಾಸಿ ಜ್ಯೋತಿ (32) ಅಪರಾಧಿ. ಜ್ಯೋತಿ ಅವರನ್ನು ವಿದ್ಯಾನಗರದ ವೀರೇಶ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಬಟ್ಟೆ ತೊಳೆಯುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳ ವಿಚಾರವಾಗಿ ವೀರೇಶನ ತಂದೆ ಶಿವಕುಮಾರ (70) ಹಾಗೂ ಜ್ಯೋತಿ ಮಧ್ಯೆ ವೈಮನಸ್ಸು ಇತ್ತು.

ಮಾವ ಶಿವಕುಮಾರ ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆಂದು ಪದೇಪದೆ ಮನೆಯಲ್ಲಿ ಗಂಡ ವೀರೇಶನ ಜೊತೆಗೆ ಜಗಳವಾಡುತ್ತಿದ್ದಳು. 2022ರ ನ.4ರಂದು ಬೆಳಗ್ಗೆ 11.30ರ ವೇಳೆ ವೃದ್ಧ ಶಿವಕುಮಾರ ಮಲಗಿದ್ದರು. ಆಗ ಸೊಸೆ ಜ್ಯೋತಿಯು ಮಾವನ ಮೇಲೆ ಬಿಸಿನೀರು, ಕಾರದ ಪುಡಿ ಎರಚಿ, ವೇಲ್‌ನಿಂದ ಕುತ್ತಿಗೆಗೆ ಬಿಗಿದು, ಒನಕೆಯಿಂದ ತಲೆಯ ಹಿಂಭಾಗಕ್ಕೆ ಜ್ಯೋತಿ ಹೊಡೆದು, ಕೊಂದಿದ್ದಳು. ತಂದೆ ಕೊಲೆ ಬಗ್ಗೆ ಪುತ್ರ ವೀರೇಶ್‌ ತನ್ನ ಪತ್ನಿ ಜ್ಯೋತಿ ವಿರುದ್ಧ ದೂರು ನೀಡಿದ್ದರು.

ಪ್ರಕರಣ ತನಿಖಾಧಿಕಾರಿ ಯು.ಸತೀಶಕುಮಾರ ನೇತೃತ್ವದಲ್ಲಿ ಪೊಲೀಸರು ಹಂತಕಿ ಜ್ಯೋತಿಯನ್ನು ಬಂಧಿಸಿ, ಆಕೆಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೆ.ವಿ.ವಿಜಯಾನಂದ ಪ್ರಕರಣದ ವಿಚಾರಣೆ ನಡೆಸಿದ್ದರು. ಜ್ಯೋತಿಯನ್ನು ಅಪರಾಧಿ ಎಂದು ತೀರ್ಮಾನಿಸಿ, 4 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ ವಿಧಿಸಿದರು. ಪಿರ್ಯಾದಿ ಪರ ಸರ್ಕಾರಿ ವಕೀಲ ಕೆ.ಎಸ್.ಸತೀಶಕುಮಾರ ವಾದ ಮಂಡಿಸಿದ್ದರು.

ತನಿಖಾಧಿಕಾರಿ. ಪೊಲೀಸ್ ನಿರೀಕ್ಷಕ ಯು.ಸತೀಶಕುಮಾರ ಹಾಗೂ ಸಿಬ್ಬಂದಿ, ಪಿರ್ಯಾದಿ ಪರ ವಾದ ಮಂಡಿಸಿದ ಸರ್ಕಾರಿ ವಕೀಲ ಯು.ಸತೀಶಕುಮಾರ ಹಾಗೂ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ.

- - - - (ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!