ಹಿರೇ ಅಂಗ್ರೊಳ್ಳಿ ಬಳಿ ಚಿರತೆಯ ಶವ ಪತ್ತೆ

KannadaprabhaNewsNetwork |  
Published : Jan 08, 2025, 12:16 AM IST
ಖಾನಾಪುರ ತಾಲೂಕಿನ ಹಿರೇ ಅಂಗ್ರೊಳ್ಳಿ ಗ್ರಾಮದ ಬಳಿ ಪತ್ತೆಯಾದ ಚಿರತೆಯ ಶವವನ್ನು ಅರಣ್ಯಾಧಿಕಾರಿಗಳು, ವೈದ್ಯರು, ಗ್ರಾಮಸ್ಥರು ಪರಿಶೀಲಿಸಿದರು. | Kannada Prabha

ಸಾರಾಂಶ

ಖಾನಾಪುರ ತಾಲೂಕಿನ ಹಿರೇ ಅಂಗ್ರೊಳ್ಳಿ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಸೋಮವಾರ ಚಿರತೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯಾಧಿಕಾರಿ ಡಾ.ಮನೋಹರ ದಾದ್ಮಿ ಮರಣೋತ್ತರ ಪರೀಕ್ಷೆ ನಡೆಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಹಿರೇ ಅಂಗ್ರೊಳ್ಳಿ ಗ್ರಾಮದ ಹೊರವಲಯದ ಕೃಷಿ ಜಮೀನಿನಲ್ಲಿ ಸೋಮವಾರ ಚಿರತೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯಾಧಿಕಾರಿ ಡಾ.ಮನೋಹರ ದಾದ್ಮಿ ಮರಣೋತ್ತರ ಪರೀಕ್ಷೆ ನಡೆಸಿದರು.

ಹಿರೇ ಅಂಗ್ರೊಳ್ಳಿ ಬಳಿ ಪತ್ತೆಯಾಗಿರುವುದು ಗಂಡು ಚಿರತೆಯಾಗಿದ್ದು, ವಯಸ್ಸು ಸುಮಾರು 12 ವರ್ಷ ಇರಬಹುದು. ಚಿರತೆಯ ಉಗುರು, ಹಲ್ಲುಗಳು, ಚರ್ಮ, ಮೂಳೆಗಳು ಹಾಗೂ ಇತರೆ ಎಲ್ಲ ಅಂಗಾಂಗಳು ಸ್ವಾಭಾವಿಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೇಲ್ನೋಟಕ್ಕೆ ವಯೋಸಹಜವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡಿಸಿಎಫ್ ಮರಿಯಾ ಕ್ರಿಸ್ತು ರಾಜಾ, ಗಂದಿಗವಾಡ ಪಿಡಿಒ ಬಾಲರಾಜ ಭಜಂತ್ರಿ, ವಿಧಿ ವಿಜ್ಞಾನ ವನ್ಯಜೀವಿ ಸಂಶೋಧನಾ ತಜ್ಞ ಎಸ್.ಮಧುಸೂಧನ ಸೇರಿದಂತೆ ಅರಣ್ಯಾಧಿಕಾರಿಗಳು, ಅರಣ್ಯ ಪಾಲಕರು ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಚಿರತೆಯ ಮರಣೋತ್ತರ ಪರಿಕ್ಷೆ ನಡೆಸಿ ಮೃತ ದೇಹವನ್ನು ದಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ