ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ನರೇಗಾ ಸಿಬ್ಬಂದಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿ ಕಳೆದ ೧೨ ವರ್ಷಗಳಿಂದ ಮನರೇಗಾ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ಕಳೆದ ೬ ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಜೀವನ ಹಾಗೂ ಕುಟುಂಬ ನಿರ್ವಹಣೆ ಕಷ್ಟಕರವಾಗಿದ್ದು, ಕೂಡಲೇ ವೇತನ ಪಾವತಿಗೆ ಬಿಡುಗಡೆಗೊಳಿಸಲು ಮನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಮಾಡಿದರು.
ಉಪಕಾರ್ಯದರ್ಶಿ (ಅಭಿವೃದ್ಧಿ) ಪಿ.ಲಕ್ಷ್ಮೀ, ಸಹಾಯಕ ಕಾರ್ಯದರ್ಶಿ ಚಂದ್ರ ಹಾಗೂ ಜಿಲ್ಲೆಯ ನರೇಗಾ ಸಿಬ್ಬಂದಿ, ಎಡಿಪಿಸಿ, ಡಿಎಂಐಎಸ, ಡಿಐಇಸಿ , ಡಿಎಎಂ ಹಾಗೂ ತಾಲೂಕಿನ ಟಿಸಿ, ಟಿಎಇ, ಟಿಎಂಐಎಸ್, ಬಿಎಫ್ಟಿ, ಹಾಗೂ ಜಿಕೆಎಂ ಹಾಜರಿದ್ದರು.೮ಕೆಎಂಎನ್ಡಿ-೪
ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
ಶ್ರೀರಂಗಪಟ್ಟಣ:ಪ್ರಜ್ಞಾವಂತರ ವೇದಿಕೆ ಹಾಗೂ ವಿವಿಧ ಸಂಘಟನೆಯಿಂದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಒಡೆಯರ್ ಭಾವಚಿತ್ರವನ್ನು ವಾಹನದ ಮೇಲಿರಿಸಿ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.ನಂತರ ಅದೇ ಮಾರ್ಗವಾಗಿ ಮುಖ್ಯ ಬೀದಿಯಲ್ಲಿ ಸಂಚರಿಸಿ ಮೈಸೂರು- ಬೆಂಗಳೂರು ಹೆದ್ದಾರಿಯ ಗಂಜಾಂ ವೃತ್ತದವರೆಗೂ ಮೆರವಣಿಗೆ ನಡೆಸಲಾಯಿತು.
ವೇದಿಕೆ ಅಧ್ಯಕ್ಷ ವಕೀಲ ಸಿ.ಎಸ್.ವೆಂಕಟೇಶ್ ನಾಲ್ವಡಿ ಅವರ ಜೀವನ ಚರಿತ್ರೆ ಕೆಆರ್ಎಸ್ ನಿರ್ಮಾಣ ಹಾಗೂ ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆ ಗಳ ಕುರಿತು ಮಾತನಾಡಿದರು. ಈ ವೇಳೆ ಬುದ್ದ ಮಹಾಸಭಾ ಅಧಕ್ಷ ಕೆ.ಟಿ ರಂಗಯ್ಯ, ಕರವೇ ಸ್ವಾಮಿಗೌಡ, ಡಿಎಸ್ಎಸ್ ಸಂಚಾಲಕ ನಂಜುಂಡ, ಬಸವರಾಜು, ಚಿಕ್ಕತಮ್ಮೇಗೌಡ ಸೇರಿದಂತೆ ಇತರರಿದ್ದರು.