ಕನ್ನಡಪ್ರಭ ವಾರ್ತೆ ಬೆಳಗಾವಿ
ಈ ವೇಳೆ ಪರಮೇಶ ಕ್ಯಾರಕಟ್ಟಿ ಮಾತನಾಡಿ, ಯಲ್ಲೇಶ ಬಚ್ಚಲಪುರಿ 2020 ರಲ್ಲಿ ಪ್ರಥಮ ದರ್ಜೆ ಸಹಾಯಕರು ಎಂದು ಸೇವೆಗೆ ಸೇರಿದ್ದಾರೆ. ಆದರೇ ಇವರು ರಾಜಕೀಯ ಪ್ರಭಾವದಿಂದ ಕಂದಾಯ ನಿರೀಕ್ಷರ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅನುಕೂಲವಾಗುವ 8 ವಾರ್ಡಗಳನ್ನು ಸತತವಾಗಿ 3 ವರ್ಷ ಕಳೆದರು ರಾಜಕೀಯ ಒತ್ತಡ, ಸಂಘಟನೆ ಒತ್ತಡ, ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದು ಒಂದೇ ಜಾಗದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ದೂರಿದರು.
ಸಾರ್ವಜನಿಕರಿಗೆ ಪಿ.ಐ.ಡಿ ಖಾತಾ ಬದಲಾವಣೆ, ಉತಾರ ನೀಡಲು 1 ರಿಂದ 2 ತಿಂಗಳ ಮಟ್ಟಿಗೆ ತಡೆಹಿಡಿದುಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಮಹಿಳಾ ವಸತಿ ನಿಲಯಕ್ಕೆ ಹೋಗಿ ಅಸಭ್ಯ ವರ್ತನೆ ಮಾಡಿದ್ದಾರೆ ಹಾಗೂ ಇವರು ಯಡಿಯೂರಪ್ಪ ಮಾರ್ಗದಲ್ಲಿ 2 ರಿಂದ 3 ಎಕರೆ ಜಾಗೆಯನ್ನು ಭೋವಿ ಮತ್ತು ನೇಕಾರ ಜನರಿಗೆ ಕೊಡಿಸಿ ಅವರಿಗೆ ಇನ್ನುವರೆಗೆ ಯಾವುದೇ ದಾಖಲೆಗಳನ್ನು ನೀಡದೇ ತಮ್ಮ ಹೆಸರಿನಲ್ಲಿ 20 ಗುಂಟೆ ಜಾಗವನ್ನು ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದರು.ಸ್ಥಳೀಯ ಜನರು ಜಾಗೆಯನ್ನು ಕೇಳಲು ಹೋದರೆ ಗುಂಡಾಗಳನ್ನು ಕರೆಸಿ ಜನರಿಗೆ ಹೆದರಿಸುತ್ತಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಮಹಾನಗರ ಪಾಲಿಕೆಯಲ್ಲಿ ಅನೇಕ ದೂರುಗಳು ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ . ಅವರ ಮೇಲೆ ಬಹಳಷ್ಟು ಪ್ರಕರಣಗಳು ಬಾಕಿ ಇದ್ದು, ಅದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅವರ ಮೇಲೆ ಕ್ರಮ ಕೈಗೊಂಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.