ರೈತರಿಗೆ ಪಂಗನಾಮ ಹಾಕಿದ ಜಿನ್ನಿಂಗ್ ಫ್ಯಾಕ್ಟರಿ ಮಾಲಿಕನ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Nov 20, 2024, 12:33 AM IST
ಪೊಟೋ-ಪಟ್ಟಣದ ತಹಸೀಲ್ದಾರ್ ಅವರಿಗೆ ರೈತರು ಜಿನ್ನಿಂಗ್ ಪ್ಯಾಕ್ಟರಿ ಮಾಲಿಕರಿಂದ ಹಣ ಕೊಡಸುವಂತೆ ಮನವಿ ಸಲ್ಲಿಸಿದ ರೈತರು.  | Kannada Prabha

ಸಾರಾಂಶ

ಕಳೆದ 3-4 ತಿಂಗಳಿಂದ ಹಣಕ್ಕಾಗಿ ಅಲೆದಾಡುತ್ತಿದ್ದರೂ ಬಸವರಾಜ ಹಣ ನೀಡದೆ ಸತಾಯಿಸುತ್ತಿದ್ದಾರೆ

ಲಕ್ಷ್ಮೇಶ್ವರ: ಪಟ್ಟಣದ ಯುನಿಕ್ ಕಾಟನ್ ಮಿಲ್ಲಿನ ಮಾಲಿಕ ಬಸವರಾಜ ಹುಡೇದ ಎಂಬಾತ ರೈತರಿಂದ ಬಿಟಿ ಹತ್ತಿ ಖರೀದಿಸಿ ಹಣ ನೀಡದೆ ಸತಾಯಿಸುತ್ತಿರುವುದರಿಂದ ರೋಸಿ ಹೋದ ರೈತರು ಮಂಗಳವಾರ ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮೋಸ ಹೋದ ರೈತ ಹೈದರಸಾಬ್‌ ಬೆಳಗಲಿ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣದ ಹೊರ ವಲಯದಲ್ಲಿರುವ ಯುನಿಕ್ ಕಾಟನ್ ಮಿಲ್ಲಿನ ಮಾಲಿಕ ಬಸವರಾಜ ಅವರಿಗೆ ಕಳೆದ ಜುಲೈ ತಿಂಗಳಲ್ಲಿ ಹೈದರಸಾಬ್‌ ಬೆಳವಿಗಿ 11 ಕ್ವಿಂಟಲ್, ಸೋಮಪ್ಪ ಸರಾವರಿ 16 ಕ್ವಿಂಟಲ್, ಹನುಮಂತಪ್ಪ ದಿವಾನರ 32 ಕ್ವಿಂಟಲ್ ಹಾಗೂ ಕೆಂಚಪ್ಪ ಕುಂದಗೋಳ 14 ಹೀಗೆ ಒಟ್ಟು 73 ಕ್ವಿಂಟಲ್ ಹತ್ತಿಯನ್ನು ಪ್ರತಿ ಕ್ವಿಂಟಲ್‌ಗೆ ₹7500 ರಂತೆ ಮಾರಾಟ ಮಾಡಿದ್ದೇವೆ, ಒಟ್ಟು ₹5.47ಲಕ್ಷ ಹಣ ನೀಡಬೇಕಾಗಿದ್ದು. ಕಳೆದ 3-4 ತಿಂಗಳಿಂದ ಹಣಕ್ಕಾಗಿ ಅಲೆದಾಡುತ್ತಿದ್ದರೂ ಬಸವರಾಜ ಹಣ ನೀಡದೆ ಸತಾಯಿಸುತ್ತಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ವೇಳೆ ಪಿಎಸ್ಐ ಈರಣ್ಣ ರಿತ್ತಿ ಬಸವರಾಜ ಅವರೊಂದಿಗೆ ಮಾತನಾಡಿದ ಬಳಿಕ ₹3.11 ಲಕ್ಷ ಹಣ ನೀಡಿದ್ದಾರೆ. ಇನ್ನುಳಿದ ₹ 2.36 ಲಕ್ಷ ಹಣ ನೀಡುವುದಾಗಿ ಹೇಳಿ ಇದುವರೆಗೂ ನೀಡಿದೆ ಸತಾಯಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ.

ಬಸವರಾಜ ಹುಡೇದ ಅವರು ನಮ್ಮಂತೆ ಹಲವಾರು ರೈತರಿಂದ ಹತ್ತಿ ಖರೀದಿಸಿ ಅವರಿಗೂ ಹಣ ನೀಡದೆ ಮೋಸ ಮಾಡಿದ್ದಾರೆ. ಆದ್ದರಿಂದ ಬಸವರಾಜ ಅವರಿಂದ ನಮಗೆ ಬರಬೇಕಾದ ಹಣ ಕೊಡಿಸಬೇಕು ಹಾಗೂ ರೈತರಿಗೆ ವಂಚನೆ ಮಾಡುತ್ತಿರುವ ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಂಜುನಾಥ ಅಮಾಸಿ ಮಾತನಾಡಿ, ರೈತರಿಗೆ ಅನ್ಯಾಯ ಮಾಡಿರುವ ಬಸವರಾಜ ಅವರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಈ ವೇಳೆ ಕುಂದಗೋಳ ತಾಲೂಕಿ ರೈತ ಸೊಮಪ್ಪ ಸರಾವರಿ, ಹನುಮಂತಪ್ಪ ದಿವಾನದ ಹಾಗೂ ಕೆಂಚಪ್ಪ ಕುಂದಗೋಳ, ಹನಮಂತಗೌಡ ಪಾಟೀಲ ಇದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ