ಯಲ್ಲಾಪುರ: ಕಳೆದ ಒಂದು ತಿಂಗಳಿಂದ ಕಂಪ್ಲಿ ಮತ್ತು ಹಾಸಣಗಿ ವ್ಯಾಪ್ತಿಯಲ್ಲಿ ತೀರಾ ವಿದ್ಯುತ ಅವ್ಯವಸ್ಥೆ ಉಂಟಾಗಿದ್ದು, ದಿನಕ್ಕೆ ೩ ತಾಸು ವಿದ್ಯುತ್ ಇರುವುದಿಲ್ಲ. ಒಂದು ವಾರದಲ್ಲಿ ವಿದ್ಯುತ್ ಇಲಾಖೆಯವರು ಸರಿಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಕಂಪ್ಲಿ ಮತ್ತು ಹಾಸಣಗಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಮಂಚೀಕೇರಿ ಹೆಸ್ಕಾಂ ಕಚೇರಿಯ ಶಾಖಾಧಿಕಾರಿಗಳಿಗೆ ಮನವಿ ನೀಡಿ, ಆಗ್ರಹಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಕಂಪ್ಲಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಸದಸ್ಯ ರಘುಪತಿ ಹೆಗಡೆ, ಹಾಸಣಗಿ ಗ್ರಾಪಂ ಅಧ್ಯಕ್ಷ ವಿನೋದಾ ಬಿಲ್ಲವ, ಉಪಾಧ್ಯಕ್ಷ ಪುರಂದರ ನಾಯ್ಕ, ಪವನ ಕೇಸರಕರ, ದಿವಾಕರ ಪೂಜಾರಿ, ಮುಸ್ತಾದ್ ಶೇಕ್, ಬಾಲಚಂದ್ರ ಹೆಗಡೆ, ಹಿರಿಯಾ ಪೂಜಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.