ಮುದಗಲ್: ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಳಸಿದ ಪದಬಳಕೆ ಮಾಡಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದ್ದು, ಕೂಡಲೇ ಸಚವ ಸಂಪುಟದಿಂದ ಅವರನ್ನು ವಜಾಗೊಳಿಸಿ ರಾಷ್ಟ್ರಪತಿಗಳು ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಶುಕ್ರವಾರ ಮುದಗಲ್ ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ನಾಡತಹಸೀಲ್ದಾರ ತುಳಾಜಾರಾಮ್ ಸಿಂಗ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ದಲಿತ ಮುಂಖಡರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಸಂತೋಷ ಕುಮಾರ್, ಹನುಮಂತಪ್ಪ ಆಶಿಹಾಳ, ನಾಗರಾಜ ಕಟ್ಟಿಮನಿ, ಹನುಮಂತ ಬಡಿಗೇರ್, ಬಸವರಾಜ, ಮಹಾದೇವಪ್ಪ, ಹೊಳೆಯಪ್ಪ, ವೀರೇಶ ಸ್ಭೆರಿದಂತೆ ಇತರರಿದ್ದರು. ---20ಎಂಡಿಎಲ್01: ಮುದಗಲ್ ಪಟ್ಟಣದಲ್ಲಿ ದಸಂಸ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಆಗ್ರಹಿಸಿದರು.