ಕಾಲುವೆಗೆ ನೀರು ಹರಿಸಿ, ಸಮರ್ಪಕ ವಿದ್ಯುತ್ ಪೂರೈಸಲು ಆಗ್ರಹ

KannadaprabhaNewsNetwork |  
Published : Sep 17, 2026, 02:45 AM IST
ಪೊಟೋ ಸೆ.16ಎಂಡಿಎಲ್ 2. ಮುಧೋಳದಲ್ಲಿ ಮಂಗಳವಾರ ಘಟಪ್ರಭಾ ನದಿಯ ಕಾಲುವೆಗೆ ನೀರು ಹರಿಸುವಂತೆ ಮತ್ತು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳತಾಲೂಕಿನ ಕಾಲುವೆಗೆ ನೀರು ಹರಿಸಿ 15 ದಿನಗಳಾಗಿವೆ, ತಕ್ಷಣವೇ ನೀರು ಬೀಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ತಾಲೂಕಿನ ಕಾಲುವೆಗೆ ನೀರು ಹರಿಸಿ 15 ದಿನಗಳಾಗಿವೆ, ತಕ್ಷಣವೇ ನೀರು ಬೀಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.

ಘಟಪ್ರಭಾ ನದಿಯ ಎಡ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ತಹಸೀಲ್ದಾರ್ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಲಕಂ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, 40 ಸಾವಿರ ಹೆಕ್ಟೆರ್ ಭೂಮಿ ಇದ್ದು, ಈ ಜಮೀನಿನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ. ಈ ಬಗ್ಗೆ ಸರ್ವೇ ಮಾಡಿ ಮೇಲಧಿಕಾರಿಗಳಿಗೆ ಮಾತನಾಡಿದರು. ಕೂಡಲೇ ನೀರು ಬಿಡಿಸುವ ವ್ಯವಸ್ಥೆ ಆಗಬೇಕು. ವಿದ್ಯುತ್ ಪೂರೈಕೆ 7 ಗಂಟೆ ಕೊಡುತ್ತಿದ್ದು, ಅದರಲ್ಲಿ ಪದೇ ಪದೇ ಕಡಿತಗೊಳಿಸುತ್ತಿದ್ದು, ಕಡಿಮೆ ಹೊಲ್ಟೇಜ್ ನೀಡುತ್ತಿದ್ದಾರೆ. ಇದರಿಂದ ಮೋಟರಗಳು ಸುಟ್ಟು ಹಾನಿಯಾಗುತ್ತಿವೆ, ಸಮರ್ಪಕ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿ ಎಂ.ಎಸ್.ದಡೂತಿ ಮಾತನಾಡಿ, ಇನ್ನು ಮೇಲೆ ಸಮರ್ಪಕ ವಿದ್ಯುತ್ ನೀಡಲಾಗುವುದೆಂದು ಭರವಸೆ ನೀಡಿದರು.

ಜಿ.ಎಲ್.ಬಿ‌.ಸಿ ಅಧಿಕಾರಿ ಶ್ರೀಶೈಲ ಕಲ್ಯಾಣಿ ಮಾತನಾಡಿ, ಕಾಲುವೆಗೆ ನೀರು ಬಿಡಿಸುವ ಬಗ್ಗೆ ನಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ, ಗುರುವಾರ ಸಂಜೆಯೊಳಗಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭೇಟಿಯಾಗಿ ನೀರು ಬಿಡಿಸುವ ಬಗ್ಗೆ ಮಾಹಿತಿಯನ್ನು ತಹಶೀಲ್ದಾರರ ಮುಖಾಂತರ ತಿಳಿಸಲಾಗುವುದು ಎಂದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಹಿಂಪಡೆದರು. ಈ ಕುರಿತು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕಗೆ ಮನವಿ ಪತ್ರ ಸಲ್ಲಿಸಲಾಯಿತು.

ರೈತ ಮುಖಂಡರಾದ ದುಂಡಪ್ಪ ಯರಗಟ್ಟಿ, ಸುಭಾಸ ಶಿರಬೂರ ಮಂಜುನಾಥ ಅರಕೇರಿ, ಅರ್ಜುನ ಹಲಗಿಗೌಡರ, ಮಂಜುನಾಥ ಚಿಕ್ಕೂರ, ಮಹೇಶಗೌಡ ಪಾಟೀಲ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಗ್ನಿ ದುರಂತ: ಗಾಯಗೊಂಡಿದ್ದ ಮತ್ತಿಬ್ಬರ ಸಾವು
ಬೆಳೆಹಾನಿಗೊಳಗಾದ ಅರ್ಹ ರೈತರಿಗೆ ತ್ವರಿತ ಪರಿಹಾರ ಒದಗಿಸಿ