ಏಕರೂಪ ಬೀಜ ದರ ನಿಗದಿಗೆ ಒತ್ತಾಯ

KannadaprabhaNewsNetwork |  
Published : Jun 07, 2026, 02:30 AM IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ರೇಣುಕಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ರೇಣುಕಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ರೇಣುಕಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮೆಕ್ಕೆಜೋಳ ಬೀಜದ ಕಂಪನಿಗಳು ಮೊದಲು 5 ಕೆ.ಜಿ. ಬೀಜಕ್ಕೆ ₹ 200ರಿಂದ 500 ಮಾರಾಟ ಮಾಡುತ್ತಿದ್ದು, ಈಗ ಅದೇ ಕಂಪನಿ ಬೀಜಗಳು ₹ 1400ರಿಂದ 2800ರ ವರೆಗೆ ಮಾರಾಟ ಮಾಡುತ್ತಿದ್ದು ರೈತರಿಗೆ ಬಹಳ ಹೊರೆಯಾಗುತ್ತಿರುವುದರಿಂದ ದುಬಾರಿ ಬೀಜ ದರದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾನೆ. ಕೇಂದ್ರ ಸರ್ಕಾರ ಬೀಜ ಕಾಯ್ದೆಯಡಿ ಬೀಜ ದರವನ್ನು ನಿಯಂತ್ರಿಸಬೇಕು. ರಸಗೊಬ್ಬರ ದರವನ್ನು ಒಂದು ವರ್ಷದಲ್ಲಿ 4 ಬಾರಿ ಏರಿಕೆ ಮಾಡಿದ್ದು, ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ 50 ಕೆ.ಜಿ. ಡಿಎಪಿ ಗೊಬ್ಬರ ಹಾಗೂ ಕಾಂಪ್ಲೆಕ್ಸ್ ದರ ₹600ರಿಂದ ₹800 ಬೆಲೆ ಏರಿಸಿದ್ದು, ಸರ್ಕಾರ ಕೂಡಲೇ ಗೊಬ್ಬರದ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಮಾರ್ಚ್ 3ರಂದು ಹೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿತ್ತು. ರೈತರ ಸಮಸ್ಯೆಗಳಿಗೆ ತಿಂಗಳೊಳಗಾಗಿ ಎಲ್‌ಟಿ ಲೈನ್ ಮತ್ತು ಟಿಸಿಗಳನ್ನು ಮಾಡಿಸಿಕೊಡುತ್ತೇವೆ ಹಾಗೂ ಹೆಚ್ಚುವರಿ ಓವರ್ ಲೋಡ್ ಆದ ಟಿ.ಸಿ.ಗಳನ್ನು ಪರಿವರ್ತನೆ ಮಾಡಿ ತಿಂಗಳೊಳಗೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಭರವಸೆ ನೀಡಿದ್ದರೂ ಈ ವರೆಗೆ ಯಾವುದೇ ಕೆಲಸ ಆಗಿಲ್ಲ. ಕಾರಣ ರೈತರು ಮಳೆ ಬಂದರೆ ಬಿತ್ತನೆಯ ಸಮಯದಲ್ಲಿ ಕೆಲಸ ಮಾಡಲು ಬರುವುದಿಲ್ಲ. ಒಂದು ವಾರದ ಒಳಗಾಗಿ ಈ ಎಲ್ಲ ಕೆಲಸಗಳನ್ನು ಮುಗಿಸದಿದ್ದರೆ ಮತ್ತೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗೀಕರಣವನ್ನು ಮಾಡಲು ಹೊರಟಿದ್ದು, ಕರ್ನಾಟಕದ 19 ಜಿಲ್ಲೆಗಳ ವಿದ್ಯುತ್ ವಿತರಣೆಯನ್ನು ಟಾಟಾ ಕಂಪನಿಗೆ ಕೊಡಲು ತೀರ್ಮಾನಿಸಿದೆ. ಇದರಿಂದ ತಾಲೂಕಿನ ರೈತರ ಪಂಪ್ ಸೆಟ್‌ಗಳನ್ನು ನಡೆಸುವುದು ಅಸಾಧ್ಯ. ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸುವ ಹುನ್ನಾರ ನಡೆಸಿದ್ದು, ರೈತರ ಹಿತದೃಷ್ಟಿಯಿಂದ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಿಸಿರುವುದರಿಂದ ರೈತರು ಡೀಸೆಲ್ ಸಿಗದೆ ಪರದಾಡುತ್ತಿದ್ದು, ದರ ಕಡಿಮೆ ಮಾಡುವುದರ ಜತೆಗೆ ಸಮರ್ಪಕ ವಿತರಣೆ ಮಾಡಬೇಕು. ಭೂ ಮಾಪನ ಇಲಾಖೆಯಲ್ಲಿ ಲೈಸೆನ್ಸ್ ಸರ್ವೇದಾರರನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ವಾಟ್ನಿ ನಕ್ಷೆ, ಖರೀದಿ ನಕ್ಷೆ ರೈತರು ತುಂಬಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು. ಕಚೇರಿ ಕೆಲಸ ಪ್ರಾರಂಭ ಮಾಡಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಎಲ್ಲ ಹಕ್ಕೊತ್ತಾಯಗಳನ್ನು ಇದೇ 10ರೊಳಗಾಗಿ ಈಡೇರಿಸದಿದ್ದರೆ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ಗೋಲಿಬಾರ್‌ನಲ್ಲಿ ಮರಣ ಹೊಂದಿದ ಪುಟ್ಟಪ್ಪ ಹೊನ್ನತ್ತಿ ಮತ್ತು ಸಿದ್ಲಿಂಗಪ್ಪ ಚೂರಿ ಅವರ ಬಲಿದಾನದ ದಿನವನ್ನು ರೈತ ಹೋರಾಟ ದಿನವಾಗಿ ಆಚರಿಸುತ್ತಿದ್ದು, ಅಂದು ಹೆದ್ದಾರಿ ಬಂದ್ ಮಾಡಿ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಜಿಲ್ಲಾ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ, ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಈರಪ್ಪ ಮಾಳೂರು, ಶಾಂತನಗೌಡ ಪಾಟೀಲ, ಯಶವಂತ ತಿಮಕಾಪೂರ ಸೇರಿ ವಿವಿಧ ಗ್ರಾಮಗಳ ರೈತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30ರಿಂದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ
ಖಾಸಗಿ ಶಾಲೆಗಳು ಅಮೂಲ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿವೆ