- ಸಾಮರ್ಥ್ಯ ಭವನದಲ್ಲಿ ಅಧಿಕಾರಿಗಳು, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರ ಸಭೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬುಧವಾರ ತಾಲೂಕಿನ ಸಾಮರ್ಥ್ಯ ಭವನದಲ್ಲಿ ಅಧಿಕಾರಿಗಳ ಮತ್ತು ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪಟಾಕಿ ಮಾರಾಟಗಾರರ ಸಭೆಯಲ್ಲಿ ಪಟಾಕಿ ಮಾರಾಟ ಸುರಕ್ಷಿತ ವ್ವವಸ್ಥೆಗಳ ಬಗ್ಗೆ ವಿವಿಧ ಇಲಾಖೆಗಳ ಮಾರ್ಗಸೂಚಿಗಳ ವಿವರಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಅವರು ನೊಡಲ್ ಅಧಿಕಾರಿಯಾಗಿದ್ದಾರೆ. ಬೆಸ್ಕಾಂ, ಗ್ರಾಮ ಪಂಚಾಯಿತಿ ಹಂತದಲ್ಲಿ ಪಿಡಿಒಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಈ ಎಲ್ಲ ಇಲಾಖೆಗಳಿಂದ ಅನುಮತಿ ಪತ್ರವನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪಟಾಕಿ ಮಾರಾಟಗಾರರು ಪಡೆಯಬೇಕಾಗುತ್ತದೆ. ಇದರ ಜೊತೆಯಲ್ಲಿ ಜಿ.ಎಸ್.ಟಿ. ನೋಂದಣಿ ಮಾಡಿಸಿ, ನಕಲು ಪ್ರತಿ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಅಫಿಡವಿಟ್ಗಳನ್ನು ಅನುಮತಿಗೆ ಸಲ್ಲಿಸುವ ಅರ್ಜಿಯೊಂದಿಗೆ ನೀಡಬೇಕು ಎಂದು ಹೇಳಿದರು.ಸುರಕ್ಷತಾ ಕ್ರಮಗಳಿಗೆ ಸಹಕರಿಸಿ:
ಸಾಮಾನ್ಯವಾಗಿ ದೀಪಾವಳಿ ನಂತರ ಕಿರು ದೀಪಾವಳಿ, ತುಳಸಿ ಹಬ್ಬದಂದು ಕೂಡ ಜನರು ಪಟಾಕಿ ಹೊಡೆಯುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಅ.28ರಿಂದ ನ.26ರವರೆಗೆ ಪಟಾಕಿ ಮಾರಾಟಕ್ಕಾಗಿ ಅನುಮತಿ ನೀಡಬೇಕೆಂದು ಮಾರಾಟಗಾರು ಅಧಿಕಾರಿಗಳಿಗೆ ಮನವಿ ಮಾಡಿದರು. ಆಗ ಈ ಬೇಡಿಕೆಗೆ ಸ್ಪಂದಿಸಿ, ಅನುಮತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಪಟಾಕಿಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡುವಂತಿಲ್ಲ. ಅಗತ್ಯಕ್ಕೆ ತಕ್ಕಂತೆ ಹೋಲ್ ಸೇಲ್ ಮಾರಾಟಗಾರರಿಂದ ಪಟಾಕಿ ತರಿಸಿಕೊಂಡು ಮಾರಾಟ ಮಾಡಬೇಕು. ಮಾರಾಟ ಮಳಿಗೆಗಳಲ್ಲಿ ಅಗ್ನಿ ಪ್ರತಿಬಂಧಕಗಳು, ನೀರು, ಮರಳಿನ ಚೀಲಗಳನ್ನು ಇಟ್ಟಿರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಶ್ಯಾಮ್ ವರ್ಗೀಸ್, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಚನ್ನಗಿರಿ ತಹಸೀಲ್ದಾರ್ ಶಂಕರಪ್ಪ, ಹೊನ್ನಾಳಿ ಬೆಸ್ಕಾಂ ಎಇಇ ಜಯಪ್ಪ, ನ್ಯಾಮತಿ ಬೆಸ್ಕಾಂ ಶ್ರೀನಿವಾಸ್, ಅಗ್ನಿಶಾಮಕ ದಳದ ಅಧಿಕಾರಿ ಪರಶುರಾಮಪ್ಪ, ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ರವಿ, ಕಂದಾಯ ಇಲಾಖೆ ಅಧಿಕಾರಿಗಳು, ಹೊನ್ನಾಳಿ, ಚನ್ನಗಿರಿ ನ್ಯಾಮತಿ ತಾಲೂಕುಗಳ ಪಟಾಕಿ ಮಾರಾಟಗಾರರು ಭಾಗವಹಿಸಿದ್ದರು.
ಕೋಟ್ ಪಟಾಕಿ ಪರವಾನಿಗೆಯನ್ನು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಕೊಡಲಾಗುವುದು. ರಾತ್ರಿ 10 ಗಂಟೆ ನಂತರ ಪಟಾಕಿಗಳನ್ನು ಹೊಡೆಯುವಂತಿಲ್ಲ. ಮಾರಾಟಗಾರರು ನೇರವಾಗಿ ಮಕ್ಕಳಿಗೆ ಪಟಾಕಿ ಮಾರಾಟ ಮಾಡದೇ ಪೋಷಕರೊಂದಿಗೆ ಬಂದಾಗ ಮಾತ್ರ ಪಟಾಕಿ ನೀಡಬೇಕು
- - - -16ಎಚ್.ಎಲ್.ಐ1: