-ಆಶ್ರಯ ಮನೆಗಳ ಹಕ್ಕು ವಿತರಣೆ ಮಾಡುವತನಕ ಉಪವಾಸ, ಧರಣಿ: ರವೀಂದ್ರರೆಡ್ಡಿ ಬಿಗಿ ಪಟ್ಟು
ಕನ್ನಡಪ್ರಭ ವಾರ್ತೆ ಗುರುಮಠಕಲ್
ಆಶ್ರಯ ಮನೆಗಳ ಹಕ್ಕು ವಿತರಣೆ ಮಾಡುವತನಕ ಉಪವಾಸ ಸತ್ಯಗ್ರಹ, ಧರಣಿ ನಡೆಸಲಾಗುವುದು ಎಂದು ಸಮಾಜ ಸೇವಕ ರವೀಂದ್ರರೆಡ್ಡಿ ಪೊತುಲ್ ತಿಳಿಸಿದ್ದಾರೆ.ಪುರಸಭೆ ಮುಂದುಗಡೆ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಸಲ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರು ಪುರಸಭೆ ಕಾರ್ಯಾಲಯದಲ್ಲಿ ಆಶ್ರಯ ಮನೆಗಳ ವಿತರಿಸದೆ ಕಾರ್ಯಕ್ರಮ ನಡೆಸಿ 15 ದಿವಸಗಳೊಳಗೆ ಮನೆ ಹಕ್ಕು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ, ಇದುವರೆಗೂ ಹಕ್ಕು ಪತ್ರ ವಿತರಿಸಿಲ್ಲ. ನ್ಯಾಯ ಸಿಗುವವರೆಗೆ ಉಪವಾಸ ಸತ್ಯಗ್ರಹ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಚಂದ್ರಶೇಖರ ಮಡಿವಾಳ, ಶರಣು ಮೇದಾ, ಎಂ.ಡಿ. ಜಾಫರ್, ಸಾಯಿಲು ಮಡಿವಾಳ, ನಾರಾಯಣ ಮಜ್ಜಿಗೆ, ಗುರುನಾಥ ಕುಂಬಾರ, ರಮೇಶ್ ಮಿಸ್ಕಿನ್, ವಣ್ಣಮ್ಮ, ಸುಜಾತಾ ಮನ್ನೆ, ನರಸಮ್ಮ, ಶಮಿಮ್ ಬೇಗಂ, ರುಖಿಯಾ ಬೇಗಂ, ಬಾಷಾ ಬಿ., ನೂರ್ಜಾ ಬೇಗಂ, ಸಿದ್ದಪ್ಪ ಗುಗ್ಗಲ್, ಪೀರ್ ಅಹ್ಮದ್, ಸಲೀಮ್, ಅಶೋಕ್ ಸೇರಿದಂತೆ ಫಲಾನುಭವಿಗಳು ಇತರರಿದ್ದರು.--
20ವೈಡಿಆರ್3: ಗುರುಮಠಕಲ್ ಪಟ್ಟಣದ ಪುರಸಭೆ ಎದುರು ಆಶ್ರಯ ಮನೆ ಹಕ್ಕು ಪತ್ರ ಪಡೆಯಲು ಆಗ್ರಹಿಸಿ ಫಲಾನುಭವಿಗಳು ಧರಣಿ ಸತ್ಯಾಗ್ರಹ ನಡೆಸಿದರು.