ಕ್ರೀಡೆಗಳಿಂದ ಶಿಸ್ತು-ಸಹಕಾರ ಮನೋಭಾವನೆ ಪ್ರಾಪ್ತಿ: ಎಸ್.ವಿ. ಸಂಕನೂರ

KannadaprabhaNewsNetwork |  
Published : Dec 24, 2024, 12:50 AM IST
23ಜಿಡಿಜಿ12 | Kannada Prabha

ಸಾರಾಂಶ

ಸಂಗೀತ, ಸಾಹಿತ್ಯ, ಕ್ರೀಡೆ, ಅಧ್ಯಾತ್ಮ ಹೀಗೆ ಅನೇಕ ಕ್ಷೇತ್ರಗಳಿಗೆ ಗದಗ ಜಿಲ್ಲೆ ಅನುಪಮ ಕೊಡುಗೆ ನೀಡಿದ್ದು, ಕ್ರೀಡೆಯಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಾಧಕರೂ ಈ ನೆಲದವರಾಗಿದ್ದಾರೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಗದಗ: ಕ್ರೀಡೆಗಳಿಂದ ಶಿಸ್ತು, ಸಹಕಾರ ಮನೋಭಾವನೆ ಬೆಳೆಯಲಿದ್ದು, ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂವರ್ಧನೆಗೆ ವರದಾನವಾಗಿವೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಅವರು ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ.ಪೂ.), ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಕರ್ನಾಟಕ ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘ, ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ 2024-25ನೇ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ಲೋರ್‌ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಸಂಗೀತ, ಸಾಹಿತ್ಯ, ಕ್ರೀಡೆ, ಅಧ್ಯಾತ್ಮ ಹೀಗೆ ಅನೇಕ ಕ್ಷೇತ್ರಗಳಿಗೆ ಗದಗ ಜಿಲ್ಲೆ ಅನುಪಮ ಕೊಡುಗೆ ನೀಡಿದ್ದು, ಕ್ರೀಡೆಯಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಾಧಕರೂ ಈ ನೆಲದವರಾಗಿದ್ದಾರೆ. ಗದುಗಿನವರಾದ ರಾಜು ಬಾಗಡೆ ಹಾಗೂ ಸುನೀಲ್ ಜೋಶಿ ಕ್ರೀಡಾ ಸಾಧನೆಗಳು ಅವಿಸ್ಮರಣೀಯವಾಗಿವೆ. ಪ್ಲೋರ್‌ಬಾಲ್ ಕ್ರೀಡೆ ಈ ಭಾಗದಲ್ಲಿ ಇನ್ನಷ್ಟು ಜನಪ್ರಿಯತೆ ಪಡೆಯಬೇಕಿದ್ದು, ಅದಕ್ಕೆ ಇಂಥ ಪಂದ್ಯಾವಳಿಗಳ ಆಯೋಜನೆ ಸಹಕಾರಿಯಾಗಲಿವೆ ಎಂದರು.

ಶಾಲಾ ಶಿಕ್ಷಣ ಇಲಾಖೆ (ಪಪೂ) ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಿಕ ಮಾತನಾಡಿ, ಪಪೂ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸುವಾಗ ಒಂದೊಂದು ಜಿಲ್ಲೆಗೆ ಆಯಾ ಕ್ರೀಡೆಗಳು ನಿಗದಿಯಾಗಿರುತ್ತವೆ. ಪ್ಲೋರ್‌ಬಾಲ್ ಕ್ರೀಡೆ 60ರ ದಶಕದಲ್ಲಿ ಹುಟ್ಟಿಕೊಂಡರೂ ಭಾರತದಲ್ಲಿ ಹೆಚ್ಚು ಚಿರಪರಿಚಿತವಾಗಿಲ್ಲ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿದರು. ಕ್ರೀಡಾಕೂಟದ ಜಿಲ್ಲಾ ಸಂಚಾಲಕ ಎಂ.ಕೆ. ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 13ಕ್ಕೂ ಹೆಚ್ಚು ಜಿಲ್ಲೆಗಳ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ತೋಂಟದ ಸಿದ್ಧೇಶ್ವರ ಪಪೂ ಕಾಲೇಜು ವಿದ್ಯಾರ್ಥಿನಿ ನಯನಾ ಅಳವಂಡಿ ಪ್ರಾರ್ಥಿಸಿದರು. ಅಶೋಕ ಅಂಗಡಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಸೋಮಣ್ಣವರ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿ.ಎನ್. ಕುರ್ತಕೋಟಿ, ಕ್ಷೇತ್ರ ಶಿಕ್ಷಣಾಧಿಕಾರಿ ನಡುವಿನಮನಿ, ಎಸ್.ಎಸ್. ಕುಲಕರ್ಣಿ, ಬಿ.ಜಿ. ಗಿರಿತಮ್ಮಣ್ಣವರ, ಹೇಮಂತ ಶಿವಪ್ಪಯ್ಯನಮಠ, ಶಶಿಧರ ಕುರಿ, ಎಸ್.ಎಸ್. ಕುಲಕರ್ಣಿ, ವಿ.ಕೆ. ದ್ಯಾಮನಗೌಡರ, ಶಶಿಧರ ಕುರಿ, ವಿ.ಎಸ್. ದಲಾಲಿ, ಅರ್ಜುನ ಗೊಳಸಂಗಿ, ಬಿ.ಎಸ್. ರಾಠೋಡ, ವೈ.ಎಸ್. ಹುನಗುಂದ, ವೈ.ಆರ್. ಬೇಲೇರಿ, ಕಿಶೋರಬಾಬು ನಾಗರಕಟ್ಟಿ, ಬಿ.ಎಂ. ಚಿಕ್ಕಣ್ಣನವರ, ಎ.ಜೆ. ಹಿರೇಗೌಡ್ರ, ಮಹೇಶ ನವಲಗುಂದ, ರವಿ ಕುಲಕರ್ಣಿ, ಎಸ್.ಆರ್. ಹಿರೇಗೌಡರ, ಉಮೇಶ ಹಿರೇಮಠ, ಪವಾಡಿಗೌಡ್ರ, ಎಸ್.ಐ. ಮೇಟಿ, ಪ್ರಿಯಾಂಕಾ ನಡುವಿನಮನಿ, ಸುಧಾ ಹುಚ್ಚಣ್ಣವರ ಹಾಗೂ ಪಪೂ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಜರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ