ಪ್ರತಿಭಟನೆ ಮಾಡುವುದಾಗಿ ಡಿಎಸ್ಎಸ್ ಮುಖಂಡ ಸಂದೇಶ್ ಎಚ್ಚರಿಕೆ ಕನ್ನಡಪ್ರಭ ವಾರ್ತೆ ಹಾಸನ
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ನಡೆಯುತ್ತಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತ ವಿಫಲವಾಗಿದೆ. ಒಂದಲ್ಲ ಒಂದು ಕಾರಣಕ್ಕೆ ದಲಿತರು, ದುರ್ಬಲರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅಪಮಾನ ನಡೆಯುತ್ತಲೇ ಇದೆ ಎಂದು ದೂರಿದರು.
‘ಈ ಸಂಬಂಧ ನಾವು ದೂರು ನೀಡಲು ಹೋದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಮ್ಮ ಸಮಸ್ಯೆ ಆಲಿಸುವುದಿರಲಿ, ಕೇಳುವುದಕ್ಕೂ ವ್ಯವಧಾನ, ಸೌಜನ್ಯ ತೋರಲಿಲ್ಲ. ಜಿಲ್ಲೆಗೆ ಬಂದಾಗ ಪ್ರತಿಯೊಬ್ಬ ನೊಂದವರ, ಬಡವರ ಹಾಗೂ ಸಮಾಜದ ನೋವು-ನಲಿವಿಗೆ ಸ್ಪಂದಿಸಲಿದ್ದಾರೆ. ದನಿಯಾಗಲಿದ್ದಾರೆ ಎಂಬ ಆಶಾಭಾವ ಇತ್ತು. ಆದರೀಗ ದಮನಿತರಿಗೆ ಆಗುತ್ತಿರುವ ಅನ್ಯಾಯ, ನೋವು ಹೇಳಲು ಹೋದರೆ ಕೇಳಿಸಿಕೊಳ್ಳುತ್ತಿಲ್ಲ. ದಲಿತರ ಮೇಲೆ ದೌರ್ಜನ್ಯ ನಡೆದರೆ ತುರ್ತು ಕ್ರಮ ಕೈಗೊಳ್ಳಿ ಎಂಬ ಸಿಎಂ ಅವರ ಆದೇಶಕ್ಕೂ ಇಲ್ಲಿ ಮಾನ್ಯತೆ ಸಿಗುತ್ತಿಲ್ಲ’ ಎಂದು ಆರೋಪಿಸಿದರು.ಮಡೆನೂರು ಬಳಿಯ ಸತ್ತಿಗನಹಳ್ಳಿ ದೇವಾಲಯಕ್ಕೆ ದಲಿತರ ಪ್ರವೇಶ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೂ ಅಲ್ಲಿಗೆ ಮೇಲಾಧಿಕಾರಿಗಳು ಬರಲಿಲ್ಲ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ವಿವಿಧ ದಲಿತ ಸಂಘಟನೆ ಮುಖಂಡರಾದ ಆರ್.ಪಿ.ಐ. ಸತೀಶ್, ವಿಜಯಕುಮಾರ್, ಶಿವಮ್ಮ, ಅಂಬುಗ ಮಲ್ಲೇಶ್, ಹೆತ್ತೂರು ನಾಗರಾಜ್, ಪ್ರಸನ್ನ ಇದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿವಿಧ ದಲಿತ ಸಂಘಟನೆಗಳ ಮುಖಂಡರು.