ಗಣಪತಿ ಸಚ್ಚಿದಾನಂದ ಸ್ವಾಮೀಜಿ ವರ್ಧಂತಿ

KannadaprabhaNewsNetwork |  
Published : May 26, 2024, 01:31 AM ISTUpdated : May 26, 2024, 01:32 AM IST
3 | Kannada Prabha

ಸಾರಾಂಶ

ವಿಶೇಷಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ. ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಇಂಥವರ ಸೇವೆ ಮಾಡುವುದು ನಿಜಕ್ಕೂ ಪುಣ್ಯ, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು.

ಕನ್ನಡಪ್ರಭ ವಾರ್ತೆ ಮೈಸೂರು

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82ನೇ ವರ್ಧಂತಿ ಪ್ರಯುಕ್ತ ವಿಶೇಷಚೇತನರಿಗೆ ಅಗತ್ಯ ಉಪಕರಣಗಳನ್ನು ಶನಿವಾರ ವಿತರಿಸಲಾಯಿತು.

ನಗರದ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀಗಳು ವಿಶೇಷ ಚೇತನರ ಬಳಿಗೆ ಹೋಗಿ, ಅವರ ಆರೋಗ್ಯ ವಿಚಾರಿಸಿ ಸಲಕರಣೆ ವಿತರಿಸಿದರು.

ಈವೇರಳೆ ಗಣಪತಿ ಶ್ರೀಗಳು ಮಾತನಾಡಿ, ವಿಶೇಷಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ. ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಇಂಥವರ ಸೇವೆ ಮಾಡುವುದು ನಿಜಕ್ಕೂ ಪುಣ್ಯ, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು. ದೇವರು ಇವರೆಲ್ಲರಿಗೂ ಆಯಸ್ಸು ಆರೋಗ್ಯ ಕೊಟ್ಟು ಒಳ್ಳೆಯದು ಮಾಡಲಿ. ಭಕ್ತರಿಗೂ ಒಳಿತಾಗಲಿ ಎಂದು ಅವರು ಹಾರೈಸಿದರು.

40 ವೀಲ್‌ ಚೇರ್ಸ್, 8 ವಾಕರ್ಸ್, 10 ಕ್ರಚರ್ಸ್, 5 ಸ್ಟಿಕ್ ಗಳು ಸೇರಿ ಒಟ್ಟು 82 ಉಪಕರಣಗಳನ್ನು ವಿಕಲಚೇತನರಿಗೆ ಶ್ರೀಗಳು ವಿತರಿಸಿದರು. ನಂತರ ಅವಧೂತ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸ್ವಾಮೀಜಿಯವರು ಶ್ರೀ ಚಕ್ರಪೂಜೆ ಮತ್ತು ಹೋಮಗಳು ನೆರವೇರಿದವು, ನಂತರ ಆಶ್ರಮದ ಆವರಣದಲ್ಲಿರುವ ತಾಯಿ ರಾಜರಾಜೇಶ್ವರಿ ದೇವಿ ಸೇರಿದಂತೆ‌ಎಲ್ಲಾ ದೇವರುಗಳಿಗೆ ಸ್ವಾಮೀಜಿ ಪೂಜೆ ಸಲ್ಲಿಸಿ, ನಂತರ ‌ಶ್ರೀಹರಿ ಸನ್ನಿಧಿಯಲ್ಲಿ ಹೋಮ ಕಾರ್ಯದಲ್ಲಿ ಪಾಲ್ಗೊಂಡರು.

ಇದಕ್ಕೂ ಮೊದಲು ದತ್ತ ಹ್ಯೂಮನ್ ಸರ್ವೀಸಸ್ ಸ್ವಯಂಸೇವಕರ ವತಿಯಿಂದ ಶ್ರೀಗಳಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯಿತು. ‌ನಾದಮಂಟಪದಲ್ಲಿ ಲೋಕ ಕಲ್ಯಾರ್ಥವಾಗಿ‌ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ವೈಭವವಾಗಿ ನೆರವೇರಿತು. ಶ್ರೀ ದತ್ತ ವಿಜಯಾನಂದ ಶ್ರೀಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನೆರವೇರಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!