ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆರಗೋಡು ಹೋಬಳಿಯ ಅಂಕಣ್ಣನದೊಡ್ಡಿ ಸರ್ಕಾರಿ ಶಾಲೆಯಲ್ಲಿ ಅಲೆಪ್ಪಿ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ಪರಿಕರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ವ್ಯಾಪ್ತಿಯಲ್ಲಿ ಬಡತನದಲ್ಲಿರುವ ಪೋಷಕರು ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಮಕ್ಕಳಿಗೆ ಶಿಕ್ಷಣಕೊಡಿಸಲು ಸಾಧ್ಯವಿಲ್ಲ, ಸರ್ಕಾರಿ ಶಾಲೆಗಳು ಸಬಲೀಕರಣಗೊಂಡರೆ ದುರ್ಬಲವರ್ಗದವರಿಗೆ ಶಿಕ್ಷಣ ಸಿಗಲು ಸಾಧ್ಯ ಎಂದರು.ಅಲಯನ್ಸ್ ಸಂಸ್ಥೆಯ ಅಲೆಪ್ಪಿ ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೆಲ್ಟ್, ಟೈ, ಬ್ಯಾಡ್ಜ್, ಲೇಖನಿ ಸಾಮಗ್ರಿಗಳನ್ನು ನೀಡಿದರು. ಅಲೆಪ್ಪಿ ಅಲೆಯನ್ಸ್ ಸಂಸ್ಥೆ ಅಧ್ಯಕ್ಷ ಶಂಕರಯ್ಯ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜೆ.ಮಂಜುನಾಥ್, ಎಸ್.ಎನ್ ಕೃಷ್ಣಪ್ಪ, ಶಿವಕುಮಾರ್, ಶಿಕ್ಷಕಿಯರಾದ ನಾಗರತ್ನ, ಶಕೀಲಾಪತಿ, ಅಡುಗೆ ಸಹಾಯಕಿ ಸ್ವರೂಪ ಹಾಜರಿದ್ದರು.
ಹಲಗೂರು:ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ಗಾಂಧಿ ಜಯಂತಿ ಅಂಗವಾಗಿ ಬಡ ಮಹಿಳೆಗೆ ಸೀರೆ ಹಾಗೂ ಪುರುಷನಿಗೆ ಬಟ್ಟೆ ವಿತರಿಸಿದರು.
ಈ ವೇಳೆ ಲಯನ್ಸ್ ಕ್ಲಬ್ ಸದಸ್ಯರಾದ ಎ.ಎಸ್.ದೇವರಾಜು, ಶಿವರಾಜು, ಡಾ.ನಾಗೇಶ್, ಕೃಷ್ಣ, ಮನೋಹರ, ಗುರುಸಿದ್ದು, ಡಾ. ಶಂಷುದ್ದೀನ್, ಪ್ರವೀಣ ಸೇರಿದಂತೆ ಇತರರು ಇದ್ದರು.