300 ಫಲಾನುಭವಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಇ-ಸ್ವತ್ತು ಖಾತೆಗಳ ವಿತರಣೆ

KannadaprabhaNewsNetwork |  
Published : Jan 21, 2025, 12:34 AM IST
ಫೋಟೋ: 20  ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ವಾಗಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಜೀವಿನಿ ಸೃಷ್ಠಿ ಅಪಾರ್ಟ್ಮೆಂಟ್‌ನ 300 ಕುಟುಂಬಗಳ ಫಲಾನುಭವಿಗಳಿಗೆ ಈ ಸ್ವತ್ತು ಖಾತೆಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು. | Kannada Prabha

ಸಾರಾಂಶ

ಮೊದಲ ಸಲ ಬಂದಾಗ ಕೊಟ್ಟ ಮಾತಿನಂತೆ ಅಪಾರ್ಟ್ಮೆಂಟಿನ ಯಾವೊಬ್ಬ ನಿವಾಸಿಯು ಈ ಸ್ವತ್ತು ಪಡೆಯಲು ಪಂಚಾಯಿತಿಗೆ ತೆರಳದೆ ತಮ್ಮ ಮನೆಯ ಬಾಗಿಲಲ್ಲಿಯೇ ಪಡೆಯಬಹುದು. ಅದಕ್ಕೆ ಅವಶ್ಯವಿರುವ ದಾಖಲಾತಿಗಳನ್ನು ಪಂಚಾಯಿತಿ ಸಿಬ್ಬಂದಿಯು ತಮ್ಮಲ್ಲಿಗೆ ಬಂದು ದಾಖಲಾತಿಗಳನ್ನು ಸ್ವೀಕರಿಸಿ ಈ ದಿನ 300 ಕುಟುಂಬಗಳಿಗೆ ಈ ಸ್ವತ್ತು ಖಾತೆಗಳನ್ನು ವಿತರಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಸೃಷ್ಠಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮನೆ ಬಾಗಿಲಿಗೆ ಇ- ಸ್ವತ್ತು ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ 300 ಕುಟುಂಬಗಳಿಗೆ ಫಲಾನುಭವಿಗಳಿಗೆ ಇ ಸ್ವತ್ತು ಖಾತೆಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಮೊದಲ ಸಲ ಬಂದಾಗ ಕೊಟ್ಟ ಮಾತಿನಂತೆ ಅಪಾರ್ಟ್ಮೆಂಟಿನ ಯಾವೊಬ್ಬ ನಿವಾಸಿಯು ಈ ಸ್ವತ್ತು ಪಡೆಯಲು ಪಂಚಾಯಿತಿಗೆ ತೆರಳದೆ ತಮ್ಮ ಮನೆಯ ಬಾಗಿಲಲ್ಲಿಯೇ ಪಡೆಯಬಹುದು. ಅದಕ್ಕೆ ಅವಶ್ಯವಿರುವ ದಾಖಲಾತಿಗಳನ್ನು ಪಂಚಾಯಿತಿ ಸಿಬ್ಬಂದಿಯು ತಮ್ಮಲ್ಲಿಗೆ ಬಂದು ದಾಖಲಾತಿಗಳನ್ನು ಸ್ವೀಕರಿಸಿ ಈ ದಿನ 300 ಕುಟುಂಬಗಳಿಗೆ ಈ ಸ್ವತ್ತು ಖಾತೆಗಳನ್ನು ವಿತರಿಸಿದ್ದೇವೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒ ಅವರನ್ನು ಶ್ಲಾಘಿಸಿದರು.

ನಿವಾಸಿಗಳ ಬೇಡಿಕೆಗಳನ್ನು ಸುಧೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಗೆ ಪರಿಹರಿಸಲು ಸ್ಥಳದಲ್ಲಿಯೇ ಸೂಚಿಸಿದರು. ಸರ್ಕಾರದ ವತಿಯಿಂದ ಈ ಭಾಗಕ್ಕೆ ಕಾವೇರಿ ನೀರಿನ ಸರಬರಾಜು ಪೇಸ್ 6 ನಲ್ಲಿ ಮಾಡಲಾಗುವುದು ಮತ್ತು ಹತ್ತಿರದಲ್ಲಿಯೇ ಬುಲೆಟ್ ಟ್ರೈನಿನ ನಿಲ್ದಾಣವು ಈ ಭಾಗದಲ್ಲಿಯೇ ಬರುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ, ವಾಗಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ರಾಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿವೆಂಕಟಸ್ವಾಮಿ, ಮುಖಂಡರಾದ ಕೆ.ಎಸ್. ಸುರೇಶ್, ಬೋದನ ಹೊಸಹಳ್ಳಿ ಪ್ರಕಾಶ್, ಸಮೇತನಳ್ಳಿ ಸೊಣ್ಣಪ್ಪ ಹಾಗೂ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''