ಟ್ರೀ-ಪಾರ್ಕ್ ನಿರ್ಮಾಣಕ್ಕೆ ಜರೂರು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Aug 14, 2026, 01:15 AM IST
ಡಾ.ಕುಮಾರ | Kannada Prabha

ಸಾರಾಂಶ

ಮೈಸೂರು ಸಕ್ಕರೆ ಕಂಪನಿಯ ಉದ್ಯಾನವನದಲ್ಲಿ ಟ್ರೀ-ಪಾರ್ಕ್ ನಿರ್ಮಾಣ ಸಂಬಂಧ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಸೂರು ಸಕ್ಕರೆ ಕಂಪನಿಯ ಉದ್ಯಾನವನದಲ್ಲಿ ಟ್ರೀ-ಪಾರ್ಕ್ ನಿರ್ಮಾಣ ಸಂಬಂಧ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಸಲ್ಲಿಸಿರುವ ಮನವಿಯಲ್ಲಿ ಕಾರ್ಖಾನೆಯ ಉದ್ಯಾನಕ್ಕೆ ಮೀಸಲಿಟ್ಟ ೧೪ ಎಕರೆ ೬ ಗುಂಟೆ ಜಮೀನಿನಲ್ಲಿ ಟ್ರೀ-ಪಾರ್ಕ್ ನಿರ್ಮಿಸುವ ಬಗ್ಗೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಅರಣ್ಯ ಇಲಾಖೆಯಿಂದ ಟ್ರೀ-ಪಾರ್ಕ್ ನಿರ್ಮಾಣ ಮಾಡಲು ಏಳೂವರೆ ಎಕರೆ ಮಾತ್ರ ಸರ್ಕಾರಿ ಜಮೀನು ಬೇಕಿದೆ. ಆದರೆ, ಮೈಷುಗರ್ ಕಾರ್ಖಾನೆಯ ಉದ್ಯಾನವನದ ಉದ್ದೇಶಕ್ಕೆ ೧೯೩೭ರಲ್ಲಿ ರೈತರಿಂದ ಭೂ ಸ್ವಾಧೀನವಾಗಿರುವ ೧೪ ಎಕರೆ ೬ ಗುಂಟೆ ಜಮೀನಿನಲ್ಲಿ ಟ್ರೀ-ಪಾರ್ಕ್ ನಿರ್ಮಾಣಕ್ಕೆ ಅನುದಾನ ಲಭ್ಯವಿರುವುದಾಗಿ ತಿಳಿಸಿದ್ದಾರೆ.

ಉದ್ಯಾನವನದ ರಸ್ತೆ ೭೦ ರಿಂದ ೮೦ ಅಡಿಗಿಂತ ಹೆಚ್ಚಿನ ಅಗಲವಿದ್ದು ಮಂಡ್ಯ ನಗರ ಮತ್ತು ಸುತ್ತಮುತ್ತಲ ಜನರಿಗೆ ಉಪಯೋಗವಾಗುವುದರಿಂದ ಅರಣ್ಯ ಇಲಾಖೆ ವತಿಯಿಂದ ಟ್ರೀ-ಪಾರ್ಕ್‌ಡಲು ಉದ್ಯಾನವನದ ಜಾಗವನ್ನು ಮೀಸಲಿಟ್ಟು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ರವೀಂದ್ರ ಕೋರಿದ್ದು, ಈ ಅಂಶಗಳ ಕುರಿತಂತೆ ಪರಿಶೀಲಿಸಿ ಅತಿ ಜರೂರಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಉದ್ಯಾನವನದ ಉದ್ದೇಶಕ್ಕಾಗಿಯೇ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದರಿಂದ ಅಲ್ಲಿ ಈಗಾಗಲೇ ೭೦ ರಿಂದ ೮೦ ವರ್ಷ ಹಳೆಯದಾದ ಮರಗಳು ಬೆಳೆದು ನಿಂತಿರುವುದು ಟ್ರೀ-ಪಾರ್ಕ್ ನಿರ್ಮಾಣಕ್ಕೆ ಪೂರಕ ವಾತಾವರಣವಿದೆ. ಹಿಂದೆ ಇದೇ ಜಾಗದಲ್ಲಿ ಕಾರಂಜಿಗಳಿಂದ ಕೂಡಿದ್ದ ಹಾಗೂ ವಿದ್ಯುತ್ ದೀಪಗಳ ಅಳವಡಿಕೆಯಿಂದ ನಿತ್ಯ ನೂರಾರು ಜನರು ಉದ್ಯಾನವನಕ್ಕೆ ಬಂದು ಹೋಗುತ್ತಿದ್ದ ನಿದರ್ಶನಗಳಿವೆ. ಹಾಗಾಗಿ ಟ್ರೀ-ಪಾರ್ಕ್ ನಿರ್ಮಾಣ ಮಂಜೂರಾಗಿರುವ ಒಂದು ಕೋಟಿ ರು. ಜಾಗದ ಕೊರತೆಯ ಕಾರಣಕ್ಕೆ ವಾಪಸ್ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವಂತೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ, ಟ್ಯಾಕ್ಸಿ ನಿಲ್ದಾಣ ಕಾಮಗಾರಿ ವಸ್ತುಗಳು ನಗರಸಭೆ ವಶಕ್ಕೆ
ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ಧ ಪಿಂಡ ಪ್ರದಾನ