ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೆರವೇರಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆಶಯ ನುಡಿಗಳನ್ನಾಡುವರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ಅಧ್ಯಕ್ಷ ಬಿ.ನಂಜನಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು ಎಂದರು.
ಕ್ಯಾಲೆಂಡರ್ ಅನ್ನು ಶಾಸಕ ಪಿ.ರವಿಕುಮಾರ್ ಬಿಡುಗಡೆ ಮಾಡುವರು. ಸಹಕಾರಿಗಳಿಗೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸನ್ಮಾನ ಮಾಡುವರರು. ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ ಸಹಕಾರಿಗಳಿಗೆ ವಿಮೆಯ ಅನುಷ್ಠಾನವನ್ನು ಬಿಡುಗಡೆಗೊಳಿಸುವರು ಎಂದರು.ಈ ಸಮ್ಮೇಳನದಲ್ಲಿ ಸಹಕಾರ ಕ್ಷೇತ್ರದಲ್ಲಿ ಬಳಸುವ ಪುಸ್ತಕಗಳು, ಗಣಕ ತಂತ್ರಜ್ಞಾನ, ಪಿಗ್ಮಿ ಮಿಷನ್, ಪಿಗ್ಮಿ ರೋಲ್ಗಳಿಗೆ ಸಂಬಂಧಿಸಿದ ಮಳಿಗೆಗಳು ಇರುತ್ತವೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸೌಹಾರ್ದ ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ದೊರಕಿಸಿಕೊಡಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ರಮೇಶ್, ಎಚ್.ಪಿ.ಪ್ರವೀಣ್, ಎಸ್.ಸಿದ್ದಲಿಂಗಯ್ಯ ಇತರರಿದ್ದರು.