ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಮೈಸೂರು ಸಾಂಸ್ಕೃತಿಕ ಉತ್ಸವದಲ್ಲಿ ಮಾತನಾಡಿದ ಅವರು, ಆಗ ಕುವೆಂಪು ಹೇಳಿದಂತೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗುತ್ತೇವೆ. ಜೊತೆಗೆ ಆತ್ಮಶಕ್ತಿ ಬೆಳೆಯುತ್ತದೆ. ಆತ್ಮಶ್ರೀಯೆಂದರೆ ತನ್ನನ್ಮೇ ತಾನು ಜಯಿಸಿಕೊಳ್ಳುವುದು. ತನ್ನಲ್ಲಿ ತಾನೇ ಧೀರತ್ವವನ್ನು ರೂಪಿಸಿಕೊಳ್ಳುವುದು ಎಂದು ಹೇಳಿದರು.
ಕನ್ನಡವೇ ಪ್ರಧಾನವಾದಾಗ ನಾವು ಬದುಕುವ ಇಡೀ ಸಮಾಜವೇ ಕನ್ನಡಮಯವಾಗುತ್ತದೆ. ಜೊತೆಗೆ ಕನ್ನಡ ಪ್ರಾಧ್ಯಾನತೆ ಪಡೆದು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಲಲಿತ ಕಲೆ, ಆಟೋಟಗಳಲ್ಲಿ ಕನ್ನಡಮಯತೆ ಎದ್ದು ಕಾಣುತ್ತದೆ ಎಂದು ಅವರು ತಿಳಿಸಿದರು.ಕನ್ನಡ ಒಬ್ಬೊಬ್ಬರ ಬಾಯಲ್ಲೂ ಒಂದೊಂದು ರೀತಿಯಲ್ಲಿ ನುಡಿಯಲ್ಪಡುತ್ತದೆ. ಎಷ್ಟೋ ಸಿನಿಮಾ ನಟ- ನಟಿಯರು ಕನ್ನಡದಲ್ಲಿ ಆಗಿಹೋಗಿದ್ದಾರೆ. ಆದರೆ, ಡಾ. ರಾಜಕುಮಾರ್ ಅವರು ಕನ್ನಡ ನುಡಿಯುತ್ತಿದ್ದ ರೀತಿ ಮಾತ್ರ ಅನನ್ಯ. ಈ ರೀತಿ ನುಡಿಯಲು ಇನ್ಯಾವ ನಟರಿಗೂ ಸಾಧ್ಯವಿಲ್ಲ. ಸಾಹಿತಿಗಳಲ್ಲೂ ಅನಕೃ ಅವರ ರೀತಿಯಲ್ಲಿ ಕನ್ನಡ ಭಾಷಣ ಮಾಡಿದವರು ಅಪರೂಪ. ಇವರೆಲ್ಲ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಬೆಳಗಿಸಿದವರು ಎಂದರು.
ಇದೇ ವೇಳೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಅವರಿಗೆ ಕರ್ನಾಟಕ ಸುಪುತ್ರ ರಾಜ್ಯ ಪ್ರಶಸ್ತಿ, ಹಿರಿಯ ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್, ಶಿಕ್ಷಕ ಟಿ. ಸತೀಶ್ ಜವರೇಗೌಡ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.