ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಚನಾಮೃತ ಬೋಧನೆ ಪ್ರವಚನ ಕಾರ್ಯಕ್ರಮ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹಕ್ಕೆ ಆತ್ಮ ಆಶ್ರಯವಾಗಿದ್ದರೆ, ಆತ್ಮ ದೇಹಕ್ಕೆ ಆಶ್ರಯವಾಗಿರುತ್ತದೆ. ಆದ್ದರಿಂದ ಅತ್ಮ ಪರಮಾತ್ಮನಲ್ಲಿ ವಿಲೀನಗೊಂಡಾಗ ಜೀವನ ಸಾರ್ಥಕವಾಗಲಿದೆ. ಪುರಾಣ, ಪ್ರವಚನ, ದೇವಾಲಯ, ಮಠ ಮಂದಿರಗಳು ಆತ್ಮಕ್ಕೆ ನೆಮ್ಮದಿ ನೀಡುವ ತಾಣಗಳು ಎಂದರು.
ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಜೀವನದ ಒತ್ತಡಗಳಿಂದ ಹೊರಬರಲು ಮಠ, ಮಂದಿರ, ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಧಾರ್ಮಿಕ ಪ್ರವಚನಗಳನ್ನು ಜನತೆಗೆ ಪ್ರಸ್ತುತಪಡಿಸಿ, ಶ್ರೀ ಹಾಲಸ್ವಾಮಿ ವಿರಕ್ತ ಮಠದ ಸೇವಾಕಾರ್ಯ ಶ್ಲಾಘನೀಯ ಎಂದರು.ನಾನು ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು, ಇಂದು ಶಾಸಕನಾಗಿದ್ದೇನೆ. ಇದಕ್ಕೆ ಗುರುಗಳ ಮಾರ್ಗದರ್ಶನ, ಪ್ರೀತಿಯೇ ಕಾರಣವಾಗಿದೆ. ತಂದೆ ಯಾವುದೇ ಅಧಿಕಾರದಲ್ಲಿ ಇಲ್ಲ, ಕೋಟ್ಯಂತರ ರು.ಗಳ ಅವ್ಯವಹಾರ ಮಾಡಿ ಮಾಧ್ಯಮಗಳಲ್ಲಿ ಬಂದಿಲ್ಲ. ಸಾಮಾನ್ಯ ವರ್ಗದ ಕೆಳದರ್ಜೆ ನೌಕರನ ಮಗನಾಗಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಮತದಾರರ ಆಶೀರ್ವಾದದಿಂದ ಗೆದ್ದು ಶಾಸಕನಾಗಿದ್ದೇನೆ. ಆದರೆ, ನನ್ನ ವಿರೋಧಿಗಳು ನನ್ನನು ಕಾಗೆ, ಗೂಬೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ಕಿವಿಗೂಡುವುದಿಲ್ಲ ಎಂದರು.
ಸಮಾರಂಭದ ದಿವ್ಯ ಸಮ್ಮುಖವನ್ನು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು ಮತ್ತು ನೇತೃತ್ವವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ಎಂ.ಬಿ. ಗಂಗಾಧರ್, ಎಂ.ಡಿ. ಮಹಾಬಲೇಶ್ವರ, ಟಿ.ಎಸ್. ಹರ್ಷ, ಜವಳಿ ಮಹೇಶ್ ಹಾಜರಿದ್ದರು.