ಅನಧಿಕೃತರ ಹಾವಳಿ ತಪ್ಪಿಸಿ ವೃತ್ತಿಗೆ ನ್ಯಾಯ ನೀಡಿ

KannadaprabhaNewsNetwork |  
Published : Aug 20, 2025, 01:30 AM IST
ಪಟ್ಟಣದ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಅನಧಿಕೃತ ಪತ್ರ ಬರಹಗಾರರನ್ನು ನಿರ್ಭಂಧಿಸಬೇಕು ಎಂದು ಒತ್ತಾಯಿಸಿ ಉಪನೊಂದಣಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೀರುವ ಪರವಾನಗಿ ಹೊಂದಿದ ಪತ್ರಬರಹಗಾರರು) | Kannada Prabha

ಸಾರಾಂಶ

ಕರ್ನಾಟಕ ನೋಂದಣಿ ನಿಯಮ ಅನ್ವಯ ಅಧಿಕೃತ ಪರವಾನಗಿ ಇಲ್ಲದೇ, ಅನಧಿಕೃತವಾಗಿ ಪತ್ರಗಳ ನೋಂದಣಿಗೆ ಸಂಬಂಧಿಸಿದ ಪತ್ರಗಳನ್ನು ತಯಾರಿಸಿ, ನೋಂದಣಿ ಕಚೇರಿಯಲ್ಲಿ ಖುದ್ದು ಹಾಜರಾಗಿ ನೋಂದಾಯಿಸುತ್ತಿರುವ ಏಜೆಂಟರನ್ನು ನಿರ್ಬಂಧಿಸಲು ಆಗ್ರಹಿಸಿ ಪಟ್ಟಣದ ಉಪ ನೋಂದಣಾಧಿಕಾರಿಗೆ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ಸದಸ್ಯರು ಮನವಿ ಸಲ್ಲಿಸಿದ್ದಾರೆ.

- ಉಪ ನೋಂದಣಾಧಿಕಾರಿಗೆ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ಮನವಿ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಕರ್ನಾಟಕ ನೋಂದಣಿ ನಿಯಮ ಅನ್ವಯ ಅಧಿಕೃತ ಪರವಾನಗಿ ಇಲ್ಲದೇ, ಅನಧಿಕೃತವಾಗಿ ಪತ್ರಗಳ ನೋಂದಣಿಗೆ ಸಂಬಂಧಿಸಿದ ಪತ್ರಗಳನ್ನು ತಯಾರಿಸಿ, ನೋಂದಣಿ ಕಚೇರಿಯಲ್ಲಿ ಖುದ್ದು ಹಾಜರಾಗಿ ನೋಂದಾಯಿಸುತ್ತಿರುವ ಏಜೆಂಟರನ್ನು ನಿರ್ಬಂಧಿಸಲು ಆಗ್ರಹಿಸಿ ಪಟ್ಟಣದ ಉಪ ನೋಂದಣಾಧಿಕಾರಿಗೆ ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘ ಸದಸ್ಯರು ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಯು.ಬಸವರಾಜ್ ಮಾತನಾಡಿ, ನಾವು ಸರ್ಕಾರದಿಂದ ಮಾನ್ಯತೆ ಪಡೆದ ದಾವಣಗೆರೆ ಜಿಲ್ಲೆ ಅಧಿಕೃತ ಪರವಾನಗಿ ಹೊಂದಿದ ಪತ್ರ ಬರಹಗಾರರಾಗಿದ್ದೇವೆ. ಜಿಲ್ಲೆಯ ವಿವಿಧ ತಾಲೂಕುಗಳ ಉಪ ನೋಂದಣಿ ಕಚೇರಿಗಳಲ್ಲಿ ಪತ್ರ ಬರಹಗಾರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ, ಚನ್ನಗಿರಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನಧಿಕೃತ ಪತ್ರ ಬರಹಗಾರರ ಹಾವಳಿಯಿಂದ ಪರವಾನಗಿ ಹೊಂದಿದ ಪತ್ರ ಬರಹಗಾರರಿಗೆ ಅನ್ಯಾಯವಾಗುತ್ತಿದೆ ಎಂದರು.

ಪ್ರತಿ ವರ್ಷವೂ ಪರವಾನಗಿ ನವೀಕರಣಗೊಳಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪತ್ರ ಬರೆಯುವ ವೃತ್ತಿಯನ್ನೇ ಅವಲಂಬಿಸಿದ್ದು, ಕಾಲಕಾಲಕ್ಕೆ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ. ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ಕಾವೇರಿ ತಂತ್ರಾಶ ಸಾರ್ವಜನಿಕರಿಗೆ ಅನುಕೂಲ ಆಗಿದೆ. ಆದರೆ, ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿನ ಸೈಬರ್ ಸೆಂಟರ್, ಡಿ.ಟಿ.ಪಿ. ಸೆಂಟರ್‌ಗಳಲ್ಲಿ ಪತ್ರ ಬರಹಗಾರರ ಪರವಾನಗಿ ಹೊಂದಿರದ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ಆನ್ ಲೈನ್ ಮೂಲಕವಾಗಿ ಸಲ್ಲಿಸುವುದು ಸರಿಯಲ್ಲ. ಇದು ನೋಂದಣಿ ಕಾಯ್ದೆ 1908 ಕಲಂ 80 ಬಿ ಉಲ್ಲಂಘನೆ. ಪರವಾನಗಿ ಹೊಂದದೇ ಇರುವವರೂ ದಸ್ತಾವೇಜುಗಳನ್ನು ತಯಾರಿಸುತ್ತಿರುವುದರಿಂದ ಪರವಾನಗಿ ಪಡೆದವರ ವೃತ್ತಿ ಜೀವನಕ್ಕೆ ಪೆಟ್ಟು ಬೀಳುತ್ತಿದೆ ಎಂದು ನೋವನ್ನು ವ್ಯಕ್ತಪಡಿಸಿದರು. ಅಲ್ಲದೇ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮನವಿ ಸಲ್ಲಿಸುವ ಸಂದರ್ಭ ಕೆ.ಆರ್.ಮಂಜುನಾಥ್, ಪಿ.ಆರ್.ಮಲ್ಲಿಕಾರ್ಜುನ್, ನೀತಿಗೆರೆ ಜಯಪ್ಪ, ಶ್ರೀಕಾಂತ್, ಎಚ್.ಶಿವಕುಮಾರ್, ಸಿ.ಎಸ್.ಸ್ವಾಮಿ, ರಾಮಪ್ಪ, ನಾಗರಾಜ್, ಎನ್.ಶಿವಮೂರ್ತಿ, ಎನ್.ಬಿ.ಬಾಲಣ್ಣ ಹಾಜರಿದ್ದರು.

- - -

-19ಕೆಸಿಎನ್‌ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅನಧಿಕೃತ ಪತ್ರ ಬರಹಗಾರರನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಉಪ ನೋಂದಣಾಧಿಕಾರಿ ಹರೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ