ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ರಾಘವ ಕಲಾಮಂದಿರದಲ್ಲಿ "ವಿವೇಕ ತೋರಣ " ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಲೀಲಾಮೃತ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.
ಸತ್ಯನಿಷ್ಠರಿಗೆ, ಸನ್ಮಾರ್ಗಿಗಳಿಗೆ ಆರಂಭದಲ್ಲಿ ಕಷ್ಟಗಳು ಬರುವುದು ಸಹಜ. ನೂರಕ್ಕೆ ನೂರರಷ್ಟು ಧರ್ಮ ಪಾಲನೆಯಿಂದ ವನವಾಸ ತಪ್ಪಿದ್ದಲ್ಲ. ಧರ್ಮ ಪಾಲನೆಯಿಂದ ವನವಾಸ ಖಚಿತ ಎಂದಷ್ಟೇ ತಿಳಿಯಬಾರದು. ಜೀವನಪೂರ್ತಿ ವನವಾಸ ಆಗುವುದಿಲ್ಲ. ಕಷ್ಟಗಳು ಬರುವುದು ಕಡಿಮೆ ದಿನಗಳಷ್ಟೇ. ಶ್ರೀರಾಮನಿಗೆ ವನವಾಸದ ಬಳಿಕ ಪಟ್ಟಾಭಿಷೇಕವಾಯಿತು. ಸುಖವೂ ದಕ್ಕಿತು ಎಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಕಷ್ಟದ ಬಳಿಕದ ಸುಖಕ್ಕೆ ಸಿದ್ಧರಾಗಬೇಕು ಎಂದರು.ಮಕ್ಕಳ ಕಡೆ ಹೆಚ್ಚು ನಿಗಾ ವಹಿಸಿ:
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಿನಿಮಾ ನಟರು, ಕ್ರಿಕೆಟ್ ಆಟಗಾರರು ಹೀರೋ ಎಂದು ಭಾವಿಸುವುದು ಕಂಡುಬರುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಿದರೆ ಅವರ ವಿವೇಕಶಕ್ತಿ ಪ್ರಜ್ವಲಗೊಂಡು ಬದುಕಿನ ದಿಕ್ಕೇ ಬದಲಾಗುತ್ತದೆ ಎಂದರು.
ಮನುಷ್ಯನಿಗೆ ಆಸೆ ಇರಬಾರದು ಎಂದಲ್ಲ. ಆಸೆ ಇರದೇ ಹೋದರೆ ಜೀವನದಲ್ಲಿ ಹುರುಪು ಇರುವುದಿಲ್ಲ. ಗೃಹಸ್ಥನಿಗೆ ಆಸೆ ಇರಬೇಕು. ಸಾಕಷ್ಟು ಹಣ ಸಂಪತ್ತೂ ಗಳಿಸಬೇಕು. ಆದರೆ, ಸಂಪತ್ತಿನ ಗಳಿಕೆ ಸನ್ಮಾರ್ಗದಲ್ಲಿರಬೇಕು. ಹೇಗೇಗೋ ದುಡ್ಡು ಮಾಡುವ ಆಸೆ ಇರಬಾರದು. ಎಷ್ಟೇ ಹಣ ಮಾಡು. ಅದೆಷ್ಟೇ ಶ್ರೀಮಂತನಾಗು, ತಪ್ಪಲ್ಲ; ಆದರೆ, ಮಾಡುವ ದುಡ್ಡು ಮತ್ತು ಸಂಪತ್ತು ನ್ಯಾಯ ಮಾರ್ಗದಲ್ಲಿರಬೇಕು. ಆಸೆ ಇರಬಾರದು. ಲೌಕಿಕ ಆಸೆಗಳು ದುಃಖಕ್ಕೆ ಮೂಲ ಎಂಬ ಮಾತು ಸನ್ಯಾಸಿಗಳಿಗೆ ಅನ್ವಯಿಸುತ್ತದೆಯೇ ವಿನಾ, ಗೃಹಸ್ಥನಿಗಲ್ಲ ಎಂದರಲ್ಲದೆ, ಪ್ರತಿ ಆಸೆಯನ್ನೂ ನ್ಯಾಯ ಮಾರ್ಗದಲ್ಲಿ ಈಡೇರಿಸಿಕೊಂಡಾಗ ಮಾತ್ರ ಜೀವ ಮಾಗಿ ಮೋಕ್ಷ ಕಾಣುತ್ತದೆ. ತೆಂಗಿನ ಗಿಡ ಬೆಳೆದಂತೆ ಎಲೆಗಳು ತಾನಾಗಿಯೇ ಬಿದ್ದು ಹೋಗುವಂತೆ ನಾವು ಬೆಳೆದಂತೆ ಕೆಳಮಟ್ಟದ ಆಸೆಗಳು ತಾವಾಗಿಯೇ ಬಿದ್ದು ಹೋಗುತ್ತವೆ.