ಕನ್ನಡಪ್ರಭ ವಾರ್ತೆ ಕೋಲಾರವೃದ್ಧಾಪ್ಯದಲ್ಲಿ ತಂದೆತಾಯಿ ಹಾಗೂ ಹಿರಿಯರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ ಅವರ ಮಾರ್ಗದರ್ಶನದಿಂದ ವಂಚಿತರಾಗದಿರಿ ವೃದ್ಧರನ್ನು ಮನೆಯಲ್ಲಿಟ್ಟು ಪೋಷಿಸುವ ಮನೋಭಾವ ಮಕ್ಕಳು ಬೆಳೆಸಿಕೊಳ್ಳಬೇಕೆಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಹೇಳಿದರು.ತಾಲೂಕಿನ ನೆರ್ನಹಳ್ಳಿಯಲ್ಲಿ ದಕಿಂಗ್ಡಂ ಎಜುಕೇಷನ್ ಟ್ರಸ್ಟ್ನಿಂದ ನೂತನವಾಗಿ ೨.೨೫ ಕೋಟಿ ವೆಚ್ಛದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ಸತ್ಯಸಾಯಿ ಬಾಬಾ ಗುರುಕುಲ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ವದ್ಧಾಶ್ರಮವೇ ನೆಮ್ಮದಿ ಕೇಂದ್ರ
ಇದೀಗ ವೃದ್ಧಾಶ್ರಮದಲ್ಲಿ ೪೫ ಕ್ಕೂ ಹೆಚ್ಚು ಮಂದಿ ವೃದ್ಧರಿದ್ದಾರೆ, ೧೦ ಮಂದಿ ಮದ್ಯವ್ಯಸನ ತ್ಯಜಿಸುವವರಿದ್ದಾರೆ, ಇವರ ಪಾಲನೆಗೆ ಅಯೋಧ್ಯೆಯಿಂದ ಆಗಮಿಸಿರುವ ವೈದ್ಯ ವಿನೋದ್ ಕುಮಾರ್ ಮೌರ್ಯ ಸಂಸ್ಥೆಯಲ್ಲಿಯೇ ವಾಸ್ತವ್ಯ ಇದ್ದು ಆರೋಗ್ಯ ಸೇವೆ ಸಲ್ಲಿಸುತ್ತಿದ್ದಾರೆ, ಅನಾಥ ಮಕ್ಕಳಿಗೆ ಅದರಲ್ಲೂ ಕೊರೊನಾ ಕಾಲಘಟ್ಟದಲ್ಲಿ ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನೀಡಿ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಗುರುಕುಲ ಆರಂಭಿಸುತ್ತಿದ್ದು ಮುಂದಿನ ವರ್ಷ ಇದು ಆರಂಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್, ಸಮೃದ್ಧಿ ಸುಧಾಕರ್, ರಾಮಾಂಜಿನಪ್ಪ, ನಾರಾಯಣಸ್ವಾಮಿ ಇದ್ದರು.