ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಭಾನುವಾರ ಸಂಜೆ 4 ಗಂಟೆಯಿಂದ ದೇವಸ್ಥಾನದಲ್ಲಿ ದೇವರಿಗೆ ಗಂಗಾಪೂಜೆ ಬಳಿಕ ಸಮಸ್ತ ಕಾಮದೇವ ಪೂಜೆ, ಆಲಯ ಪ್ರವೇಶ, ನಂದಾದೀಪ ಆರಾಧನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿ ಸಮಾಋಆರಾಧನೆ, ಹೃತ್ವಿಕ್ಗ್ರಹಣ, ಪಾನಕ ರಕ್ತಬಂಧನ, ಮಂಗಳಾರತಿ ತೀರ್ಥಪ್ರಸಾದ, ಮೃತ್ಯುಂಗ್ರಹಣ, ಅಂಕುರಾರೋಪಣ, ಪಂಚಂಗಾಭಿಷೇಕ, ಪುಣ್ಯತೀರ್ಥ, ಕಳಸಾಭಿಷೇಕ, ಷಡ್ವಶೋಧನಾ ಪೋಜೆ, ಜಲಾಧಿವಾಸ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಪೂಜಾ ಕಾರ್ಯಕ್ಕೆ ಅರ್ಚಕರು ಚಾಲನೆ ನೀಡಿದರು. ಸಂಜೆ 6 ಗಂಟೆಯಿಂದ ಪ್ರವೇಶಬಲಿ, ರಾಕ್ಷೋಘ್ನಹೋಮ, ದೇವತಾ ವಾಸ್ತು, ಪುರುಷಪೂಜೆ, ಪ್ರಧಾನಹೋಮ, ದಿಕ್ಪಾಲಕರಿಗೆಬಲಿ, ಪರಿಯಜ್ಞೀಕರಣ, ಪ್ರತಿಮಾಶೋಧನಾ, ಧ್ವಜಸ್ಥಂಭ, ಬಲಿಪೀಠಸ್ಥಾಪನೆ, ಶಿವಯೋಗಿ ಮಂಟಪ ಪ್ರತಿಷ್ಠೆ, ನವಗ್ರಹ, ಮೃತ್ಯುಂಜಯಹೋಮ, ಏಕಾದಾಶಿ ಏಕವಾರು ರುದ್ರಾದ್ವಾದಕಾದಿತ್ಯ, ಪುರುಷ ಚಂಡೇಶ್ವರ, ಅಷ್ಟಲಕ್ಷ್ಮಿ ಸಮೇತ ಹೋಮ, ನ್ಯಾಸವಿಧಾನ, ಪೀಠ ಸಂಸ್ಕಾರ ಮುಂತಾದ ಪೂಜಾ ವಿಧಿ ವಿಧಾನ ಹೋಮ ಹವನ ಕಾರ್ಯವನ್ನು ನಡೆಸಲಾಯಿತು.
ಫೆ.12ರಂದು ಮಧ್ಯಾಹ್ನ 2.30 ರಿಂದ ಧಾರ್ಮಿಕ ಸಮಾರಂಭ ನಡೆಯುತ್ತದೆ ಎಂದು ದೇವಾಲಯ ಸಮಿತಿಯವರು ಹೇಳಿದರು.