ಕನ್ನಡಪ್ರಭ ವಾರ್ತೆ ಇಳಕಲ್ಲ
ಇದೇ ವೇಳೆ ಬೆಳೆ ನಷ್ಟವಾಗಿ ಅನ್ಯಾಯಕ್ಕೆ ಒಳಗಾದ ಉಪನಾಳ ಎಸ್.ಸಿ. ಗ್ರಾಮದ ರೈತರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹಾಗೂ ಉಪಾಧ್ಯಕ್ಷ ಶಂಕರ ಪಾಟೀಲ ಅವರ ಮುಂದೆ ಕಣ್ಣೀರು ಹಾಕಿದರು.
ರೈತರಿಗೆ ಸಂತೈಸಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನ್ಯಾಯಕ್ಕಾಗಿ ನಡೆಸಿರುವ ರೈತರ ಹೋರಾಟ ಸಮರ್ಥನೀಯವಾಗಿದೆ. ಇಲ್ಲಿ ಕುಳಿತು ಕೇವಲ ಪ್ರತಿಭಟನೆ ಮಾಡಿದರೆ ಸಾಲದು. ಇದಕ್ಕೆ ಕಾನೂನಿನ ಚಡಿ ಏಟು ಬೇಕು. ಕಾನೂನಾತ್ಮಕವಾಗಿ ಹೋರಾಟ ಮಾಡುವುದು ಅತ್ಯವಶ್ಯವಾಗಿದೆ. ಇದು ಎಂಜಿನಿಯರ್ ಗಳಿಂದ ಆದ ಪ್ರಮಾದ. ರಂಗ ಸಮುದ್ರದಿಂದ ೨ ಕಿಮೀ ದೂರದ ಉಪನಾಳ ಎಸ್.ಸಿಯಲ್ಲಿ ಚೆಕ್ ಡ್ಯಾಂ ಕಾಮಗಾರಿ ಪ್ರಾರಂಭಿಸಿರುವುದೇ ಅವೈಜ್ಞಾನಿಕ. ಇದರ ಅವಶ್ಯಕತೆಯೇ ಇರಲಿಲ್ಲ. ರೈತರು ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮನವಿ ಮಾಡಿದರೂ ಯಾರದೋ ಒತ್ತಡಕ್ಕೆ ನಿರ್ಮಿಸಿ ಅಲ್ಲಿರುವ ರೈತರನ್ನು ಸಂಕಷ್ಟಕ್ಕೆ ದೂಡಿದ್ದೀರಿ. ಕೂಡಲೇ ರೈತರಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಕೊಡಬೇಕು. ಹೊಲಗಳಿಗೆ ನೀರು ಹೋಗದಂತೆ ಅಡ್ಡಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸದಾ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಅಭಯ ನೀಡಿದರು.ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹಾಗೂ ಉಪಾಧ್ಯಕ್ಷ ಶಂಕರ ಪಾಟೀಲ ಮಾತನಾಡಿ, ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಕೇಳಿ ನಾವಿಂದು ಬರಬೇಕಾಯಿತು. ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಬಂದಿರುವುದು ಈ ಹೋರಾಟಕ್ಕೆ ಆನೆ ಬಲ ಬಂದತ್ತಾಗಿದೆ. ರೈತರಿಗೆ ನ್ಯಾಯ ಸೀಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ನಾವು ಸದಾ ನಿಮ್ಮೊಂದಿರುರುತ್ತೇವೆ ಎಂದು ಹೇಳಿದರು.