ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಶಿವಳ್ಳಿ ಗ್ರಾಮದ ಶ್ರೀಮಾರಮ್ಮ ದೇವಿಯ ನೂತನ ದೇವಾಲಯದ ಮರುಪರ ಕಾರ್ಯಕ್ರಮ ಹಾಗೂ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಗುಲಕ್ಕೆ ವ್ಯಾವಹಾರಿಕ ನಿರೀಕ್ಷೆಯಲ್ಲಿ ಹೋದಾಗ ಆ ಭಾವದ ಅನುಭವವೇ ಆಗುತ್ತದೆ. ಭಕ್ತಿಯು ಗೌಣವಾಗುತ್ತದೆ. ಪ್ರತಿಯೊಬ್ಬರೂ ಇಂದ್ರೀಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ದೇವಸ್ಥಾನಗಳು ಜ್ಞಾನ, ಭಕ್ತಿ ಕೊಡುತ್ತವೆ. ಯಾವಾಗ ಯಾವುದನ್ನು ಉಪಯೋಗಿಸಬೇಕು ಎನ್ನುವುದನ್ನು ಸರಿಯಾಗಿ ಉಪಯೋಗಿಸಲು ನಮ್ಮ ಬದುಕನ್ನು ಸರಿಯಾಗಿ ಬೆಳಗಿಸಲು ಹಿರಿಯರು ಕೊಟ್ಟು ಹೋಗಿರುವ ಪರಂಪರೆಯನ್ನು ಮುಂದುವರಿಸೋಣ ಎಂದರು.ಕಳೆದ ೪೮ ದಿನಗಳ ಹಿಂದೆ ಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧೆ ಭಕ್ತಿಯಿಂದ ಉದ್ಘಾಟನೆ ಮಾಡಿದ್ದೀರಿ. ಭಕ್ತಿಯ ದೇಗುಲ, ಸೇವೆ, ಜ್ಞಾನದ ನುಡಿಗಳು ಸೇರಿದರೆ ಶ್ರೇಷ್ಠವಾಗುತ್ತದೆ ಎಂದರು.
ಆಧುನಿಕ ಯುಗದಲ್ಲಿ ನಾವು ಆಧುನಿಕ ಸಲಕರಣೆ ಸವಲತ್ತುಗಳನ್ನು ಉಪಯೋಗಿಸಿಕೊಂಡು ಅಂತರಂಗವನ್ನು ಮರೆತು, ಆಧುನಿಕವಾದುದನ್ನ ಒಪ್ಪಿಕೊಂಡು ಸತ್ಸಂಗದ ಮೂಲಕ ವಿವೇಕ ಬರಬೇಕು. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಜೋಗಿಗಳ ಸಮಾವೇಶವನ್ನು ಮಾಡಲಾಗುವುದು. ಅದೇ ರೀತಿ ಮುಂದಿನ ತಿಂಗಳು ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಭವನ ಉದ್ಘಾಟನೆ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ತಾವುಗಳು ಭಾಗವಹಿಸಬೇಕು ಎಂದರು.
ಆದಿಚುಂಚನಗಿರಿ ಶ್ರೀಕ್ಷೇತ್ರದ ವಿವಿಧ ಶಾಖಾ ಮಠಗಳ ಯತಿಗಳಾದ ಶ್ರೀ ಪುರುಷೋತ್ತಮಾನಂದನಾಥಸ್ವಾಮೀಜಿ, ಶ್ರೀ ಸಾಯಿನಾಥನಂದಸ್ವಾಮೀಜಿ, ಶ್ರೀ ಸತ್ಕೀರ್ತಿನಂದನಾಥ ಸ್ವಾಮೀಜಿ, ಶ್ರೀ ಶೈಲ ಸ್ವಾಮೀಜಿ, ಮುಖಂಡರಾದ ಜವರೇಗೌಡ ಹೇಮಂತ್ಗೌಡ, ಲಕ್ಷ್ಮಣ್ ಜಲೇಂದ್ರ, ಶೇಖರ್, ಬೋರೇಗೌಡ, ಸುರೇಶ್ ಸೇರಿದಂತೆ ಇತರರಿದ್ದರು.