ಶಂಕರಭಾರತಿ ಗೋ ಶಾಲಾ ಕಟ್ಟಡ ನಿರ್ಮಾಣಕ್ಕೆ ₹2 ಲಕ್ಷ ದೇಣಿಗೆ

KannadaprabhaNewsNetwork |  
Published : Sep 01, 2024, 01:47 AM IST
೩೧ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಮದ ಶಂಕರಭಾರತಿ ಗೋ ಶಾಲಾ ಟ್ರಸ್ಟ್ ಕಟ್ಟಡ ನಿರ್ಮಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ.೨ ಲಕ್ಷ ಮೊತ್ತದ ಚೆಕ್ ಅನ್ನು ಇತ್ತೀಚೆಗೆ ಗೋ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಸಮೀಪದ ಹುಯಿಗೆರೆ ಗ್ರಾಮದ ಶಂಕರಭಾರತಿ ಗೋ ಶಾಲಾ ಟ್ರಸ್ಟ್ ಕಟ್ಟಡ ನಿರ್ಮಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹2 ಲಕ್ಷ ಮೊತ್ತದ ಚೆಕ್‌ಅನ್ನು ಇತ್ತೀಚೆಗೆ ಗೋ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಸಮೀಪದ ಹುಯಿಗೆರೆ ಗ್ರಾಮದ ಶಂಕರಭಾರತಿ ಗೋ ಶಾಲಾ ಟ್ರಸ್ಟ್ ಕಟ್ಟಡ ನಿರ್ಮಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹2 ಲಕ್ಷ ಮೊತ್ತದ ಚೆಕ್‌ಅನ್ನು ಇತ್ತೀಚೆಗೆ ಗೋ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಸದಾನಂದ ಬಂಗೇರ ಚೆಕ್ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗೋ ಶಾಲೆ ಮುಖಾಂತರ ಗೋವುಗಳ ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ₹2 ಲಕ್ಷದ ಚೆಕ್ ಅನ್ನು ಯೋಜನೆ ಮೂಲಕ ಹಸ್ತಾಂತರಿಸಲಾಗಿದೆ. ಈ ಹಣ ಸದುಪಯೋಗವಾಗಿ ಗೋವುಗಳ ಸೇವೆ ಲಭ್ಯವಾಗಲಿ ಎಂದರು.

ಗೋ ಶಾಲಾ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಹುಯಿಗೆರೆ ಗ್ರಾಪಂ ಅಧ್ಯಕ್ಷೆ ಸುಚನಾ, ಯೋಜನಾಧಿಕಾರಿ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯ ಮುರಳೀಧರ್‌ಭಟ್, ಸುಜಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಮಹೇಶ್, ಚಂದ್ರಶೇಖರ್ ರೈ, ಕ್ಯಾಪ್ಟನ್ ಅಜಿತ್, ಒಕ್ಕೂಟದ ಅಧ್ಯಕ್ಷ ಶಿವಪ್ಪ, ಗಣೇಶ್, ಕಾಫಿ ಬೆಳೆಗಾರ ಹರೀಶ್, ವಲಯ ಮೇಲ್ವಿಚಾರಕ ಪಿ.ಸುರೇಶ್, ಸೇವಾಪ್ರತಿನಿಧಿ ಅವಿನಾಶ್, ಸ್ವಯಂ ಸೇವಕ ಸುರೇಶ್ ಕೋಟಿಯಾನ್, ಮಂಜುನಾಥ್, ಮಹೇಶ್, ರಾಕೇಶ್, ಅಭಿಷೇಕ್, ಪ್ರಮೋದ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!