ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ

KannadaprabhaNewsNetwork |  
Published : Mar 11, 2026, 02:30 AM IST
10ಐಎನ್‌ಡಿ1,ಇಂಡಿ ನಗರಸಭೆ ಬಜೆಟ್‌ ಪ್ರತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಢಳಿತಾಧಿಕಾರಿಗಳು ಡಾ.ಆನಂದ ಕೆ ,ಪೌರಾಯುಕ್ತ ಶಿವಾನಂದ ಪೂಜಾರಿ ಪ್ರದರ್ಶಿಸಿದರು. | Kannada Prabha

ಸಾರಾಂಶ

ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಇಂಡಿ ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನಲ್ಲಿ ₹5.47 ಲಕ್ಷ ಉಳಿತಾಯ ಬಜೆಟ್‌ನ್ನು ಮಂಗಳವಾರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಆಸ್ತಿ ತೆರಿಗೆ, ಕಟ್ಟಡ ಮತ್ತು ಉದ್ದಿಮೆ ಪರವಾನಗಿ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಇಂಡಿ ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನಲ್ಲಿ ₹5.47 ಲಕ್ಷ ಉಳಿತಾಯ ಬಜೆಟ್‌ನ್ನು ಮಂಗಳವಾರ ಮಂಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಜೆಟ್‌ ಮಂಡನೆಯ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಆಡಳಿತಾಧಿಕಾರಿಗಳ ಅನುಮೋದನೆಗಾಗಿ ಮಂಡಿಸಿದ ಆಯವ್ಯಯ ಬಜೆಟ್‌ ಒಪ್ಪಿಗೆ ನೀಡಿದರು.ಪ್ರಸಕ್ತ ಸಾಲಿನಲ್ಲಿ ಒಟ್ಟು ₹43.43 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹43.38 ಕೋಟಿ ವೆಚ್ಚ ತೋರಿಸಿದ್ದು, ಅತ್ಯಲ್ಪ ₹5.47 ಲಕ್ಷ ನಿರೀಕ್ಷಿತ ಉಳಿತಾಯ ತೋರಿಸಲಾಗಿದೆ. ಈ ಆಯವ್ಯಯದಲ್ಲಿ ಪ್ರಮುಖವಾಗಿ ನಗರದ ಸೌಂದರಿಕರಣಕ್ಕಾಗಿ ಸಾರ್ವಜನಿಕ ಉದ್ಯಾನವನ, ಸಾರ್ವಜನಿಕ ಗ್ರಂಥಾಲಯ,ವಿದ್ಯುತ್ ಬೀದಿ ದೀಪ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿರುತ್ತದೆ.ಪ್ರಮುಖ ಆದಾಯಗಳು: ಇಂಡಿ ನಗರಸಭೆಯ ಸನ್‌ 2026-27ನೇ ಸಾಲಿನ ಆಯ-ವ್ಯಯ ಕರಡು ಪ್ರಸ್ತಾವನೆ ಅಂದಾಜು ಆರಂಭ ಶಿಲ್ಕು ₹92.10 ಲಕ್ಷಗಳು, ಸ್ವೀಕೃತಿಗಳು: ರಾಜಸ್ವ ಸ್ವೀಕೃತಿಗಳು ₹2595.40 ಲಕ್ಷಗಳು, ಬಂಡವಾಳ ಸ್ವೀಕೃತಿಗಳು ₹892.50 ಲಕ್ಷಗಳು, ಅಸಾಧಾರಣ ಸ್ವೀಕೃತಿಗಳು ₹855.74 ಲಕ್ಷಗಳು ಒಟ್ಟು ₹4343.63 ಲಕ್ಷಗಳು ಆದಾಯ ನಿರೀಕ್ಷೆ ಮಾಡಲಾಗಿದೆ.ಪ್ರಮುಖ ವೆಚ್ಚಗಳು: ರಾಜಸ್ವ ಪಾವತಿಗಳು ₹2612.63 ಲಕ್ಷಗಳು, ಬಂಡವಾಳ ಪಾವತಿಗಳು ₹869.80 ಲಕ್ಷಗಳು, ಅಸಾಧಾರಣ ಪಾವತಿಗಳು ₹855.74 ಲಕ್ಷಗಳು ಒಟ್ಟು ₹4338.17 ಲಕ್ಷಗಳು, ಒಟ್ಟು ಉಳಿತಾಯ ಶಿಲ್ಕು ₹5.47 ಲಕ್ಷಗಳು, ಅಂದಾಜು ಅಂತಿಮ ಶಿಲ್ಕು ಒಟ್ಟು ₹97.56 ಲಕ್ಷಗಳು ಸಿದ್ಧಪಡಿಸಿ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅನುಮೋದನೆಗಾಗಿ ನಗರಸಭೆಯ ಪೌರಾಯುಕ್ತ ಶಿವಾನಂದ ಪೂಜಾರಿ ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಔದ್ರಾಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ, ಅಕೌಂಟಂಟ್ ಅಸ್ಲಂ ಖಾದಿಮ ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿಗಳಾದ ಡಾ.ಆನಂದ.ಕೆ ಬಜೆಟ್‌ಗೆ ಅನುಮೋದನೆ ನೀಡಿದ್ದಾರೆ. ಇಂಡಿ ಉಪ ವಿಭಾಗೀಯ ತಾಲೂಕು ಕೇಂದ್ರದ ಇಂಡಿ ನಗರಸಭೆ ವತಿಯಿಂದ ನಗರವನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ರೂಪಿಸಲು ಪಣ ತೊಡಲಾಗಿದೆ. ಇದಕ್ಕಾಗಿ ನಗರದ ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೊಡಿಸಬೇಕು. ನಗರ ಸೌಂದರ್ಯಕರಣ,ಉದ್ಯಾನವನ ಅಭಿವೃದ್ಧಿ, ಬೀದಿ ದೀಪಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅಳವಡಿಸಲಾಗಿದೆ. ನಗರದ ಅಭಿವೃದ್ಧಿಗೆ ನಗರ ನಿವಾಸಿಗಳು ನಗರಸಭೆಯೊಂದಿಗೆ ಸಹಕರಿಸಬೇಕು.

-ಶಿವಾನಂದ ಪೂಜಾರಿ,

ನಗರಸಭೆ ಪೌರಾಯುಕ್ತ, ಇಂಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ