2027 ರೊಳಗೆ ಎತ್ತಿನಹೊಳೆ, ಎಚ್.ಎನ್. ವ್ಯಾಲಿ ಕಾಮಗಾರಿ ಪೂರ್ಣ । ರೈತರ ಕಣ್ಣೀರು ಒರೆಸುವ ಸರ್ಕಾರ ನಮದು: ಸಿಎಂ ಡಿ.ಕೆ.ಶಿವಕುಮಾರ್
ಯಶಸ್ವಿಯಾಗಿ ಐದು ಗ್ಯಾರಂಟಿಯನ್ನು ಅನುಷ್ಠಾನಗೊಳಿಸಿರುವ ನಮ್ಮ ಸರ್ಕಾರ, ಎ ಖಾತೆ ನೀಡುವುದು ಆರನೇ ಗ್ಯಾರಂಟಿಯಾಗಿದ್ದು, ಈಗ ನೀರು ನಮ್ಮ ಏಳನೇ ಗ್ಯಾರಂಟಿ ಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಮಾಲೂರಿನ ಚೊಕ್ಕಂಡಹಳ್ಳಿ ಸಮೀಪ ಜಿಲ್ಲಾಡಳಿತ ಆಯೋಜಿಸಲಾಗಿದ್ದ 3200 ಕೋಟಿ ರು.ಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಾವು ಆಡಳಿತಕ್ಕೆ ಬಂದ ಮೇಲೆ ನೀಡಿದ ಐದು ಗ್ಯಾರಂಟಿ ಯೋಜನೆಯು ಜನತೆಯ ಬದುಕನ್ನೇ ಬದಲಾಯಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಗರು ನಮ್ಮ ಗ್ಯಾರಂಟಿ ಬಗ್ಗೆ ಟೀಕಿಸಿ ಇದು ಅನುಷ್ಠಾನಗೊಳಿಸಿ ಮುಂದುವರೆಸುವುದು ಅಸಾಧ್ಯ ಎಂದಿದ್ದರು. ಆದರೆ ಅವರೇ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆ ಕಾಪಿ ಮಾಡಿದ್ದರು ಎಂದರು.ನಮ್ಮ ಕೃಷ್ಣೇ ಬೈರೇಗೌಡ ಅವರ ಅಭಿಲಾಷೆಯಂತೆ ದಶಕಗಳಿಂದ ನಿವೇಶನ ಮಾಲೀಕರು ತೊಂದರೆ ಅನುಭವಿಸುತ್ತಿದ್ದ ಬಿ ಖಾತಾ, ಎ ಖಾತ ಕ್ಕೆ ಬದಲಾಯಿಸಿ ಕೊಡುವ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಅದು ಆರನೇ ಗ್ಯಾರಂಟಿ ಎಂದ ಮುಖ್ಯಮಂತ್ರಿಗಳು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಕಾಡದಂತೆ ಮಾಡುವ ನಮ್ಮ ಜಲ ಯೋಜನೆ ಏಳನೆ ಗ್ಯಾರಂಟಿ ಎಂದರು. ಎತ್ತಿನಹೊಳೆ, ಎಚ್.ಎನ್. ವ್ಯಾಲಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡಿ 2027 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ರೈತರ ಕಣ್ಣೀರು ಒರೆಸುವ ಸರ್ಕಾರ ನಮದು. ಸದಾ ಜನರ ಪರವಾಗಿ ಸರ್ಕಾರ ಇದೆ ಎಂದ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ನೆಡಯುತ್ತಿರುವ ಎಸ್ಐಆರ್ ಬಗ್ಗೆ ಎಚ್ಚರವಾಗಿ ಇರಲು ಹೇಳಿದರು. ಬಿಜೆಪಿಗರು ರಾಮನ ಹುಂಡಿ ಕಳ್ಳತನ ಮಾಡಿದಂತೆ ರಾಜ್ಯದಲ್ಲಿ ಆಗಲು ಬಿಡುವುದಿಲ್ಲ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿರುವ ಹುಂಡಿ ಜಾಗವನ್ನು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಲಿದೆ ಎಂದರು.
ಸಚಿವರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿ ಹೊಳೆ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ 28419 ಮಂದಿ ಪಲಾನುಭವಿಗಳಿಗೆ ವಿವಿಧ ಸವಲತ್ತು ಸೌಲಭ್ಯ ಗಳನ್ನು ಸಂಕೇತಿಕವಾಗಿ ವಿತರಿಸಲಾಯಿತು.