ಗದಗ: ಗದಗ ಜಿಲ್ಲೆ ರಚನೆಯಾಗಿ ಮೂರು ದಶಕ ಕಳೆದರೂ ಗದಗ- ಬೆಟಗೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಯೇ ಮುಂದುವರಿದಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಪರಿಷತ್ ಶೂನ್ಯ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಸ್ತಾಪಿಸಿದರು.
ಈ ವಿಷಯವನ್ನು ಹಿಂದೆಯೂ ಹಲವು ಬಾರಿ ಸದನದಲ್ಲಿ ಪ್ರಸ್ತಾಪಿಸಿದರೂ ಸಂಬಂಧಪಟ್ಟ ಸಚಿವರಿಂದ ಸಮರ್ಪಕ ಸ್ಪಂದನೆ ದೊರಕದಿರುವುದು ವಿಷಾದಕರ ಸಂಗತಿ. ಆದ್ದರಿಂದ ಈಗಲಾದರೂ ನಗರಾಭಿವೃದ್ಧಿ ಸಚಿವರು ಸ್ವತಃ ಗದಗ- ಬೆಟಗೇರಿ ನಗರಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ತಿಳಿಸಿದ್ದಾರೆ.ತಾಲೂಕು ಮಟ್ಟದ ಸದಸ್ಯರಿಗೆ ಗ್ರಾಪಂಗಳ ಉಸ್ತುವಾರಿ
ಗದಗ: ಗ್ಯಾರಂಟಿ ಯೋಜನೆಗಳ ಸಮರ್ಪಕ ನಿರ್ವಹಣೆಗಾಗಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿಯ ಸದಸ್ಯರನ್ನು ತಾಲೂಕು ಮಟ್ಟದ ಜವಾಬ್ದಾರಿಯೊಂದಿಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಾಲೂಕಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.ದೇವರಡ್ಡಿ ತಿರ್ಲಾಪೂರ ಅವರಿಗೆ ಬಿಂಕದಕಟ್ಟಿ, ಅಸುಂಡಿ(ಮೊ. 9886066157), ಮಲ್ಲಪ್ಪ ದಂಡಿನ ಅಂತೂರ- ಬೆಂತೂರ ಹಾಗೂ ಚಿಂಚಲಿ(ಮೊ. 9972046274), ಗಣೇಶಸಿಂಗ್ ಮಿಟಾಡೆ ಅವರಿಗೆ ವಾರ್ಡ್ ನಂ. 11,12,13 ಮತ್ತು 14(ಮೊ. 9448540575), ಮಲ್ಲಪ್ಪ ಎಚ್. ಬಾರಕೇರ ಅವರಿಗೆ ವಾರ್ಡ್ ನಂ. 7,8,8 ಮತ್ತು 10(ಮೊ. 7022797007), ಭಾಷಾ ಮಲ್ಲಸಮುದ್ರ ಅವರಿಗೆ ವಾ.ನಂ. 17,18,23,25 ಮತ್ತು 33(ಮೊ. 8904363984 ) ಉಸ್ತುವಾರಿಗಳನ್ನಾಗಿ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.