ಹಾವೇರಿ: ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ವಸ್ತು ಪ್ರದರ್ಶನದ ಮೂಲಕ ಅದ್ಭುತವಾಗಿ ಅನಾವರಣಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಹೇಳಿದರು.
ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಯೋಜನೆಗಳ ಮಾಹಿತಿಗಳನ್ನು ಇಲ್ಲಿ ಪ್ರಚಾರ ಪಡಿಸಿರುವುದರಿಂದ ವಸ್ತು ಪ್ರದರ್ಶನ ಮಳಿಗೆಗೆ ಬಂದಂತಹ ಜನರಿಗೆ ವಿವಿಧ ಯೋಜನೆಗಳ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ವಸ್ತು ಪ್ರದರ್ಶನ ಮಳಿಗೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ರೈತ ಸಮೃದ್ಧಿ ಯೋಜನೆ, ಬ್ರಾಂಡ್ ಬೆಂಗಳೂರು, ಬಸವಣ್ಣ ಸಾಂಸ್ಕೃತಿಕ ನಾಯಕ, ಹಸಿವು ಮುಕ್ತ ಕರ್ನಾಟಕ (ಅನ್ನ ಭಾಗ್ಯ), ಮನೆ ಮನಬೆಳಗುವ ಭಾಗ್ಯದ ಬೆಳಕು (ಗೃಹ ಜ್ಯೋತಿ), ಸಬಲೀಕರಣ ದತ್ತ ಮಹಿಳೆಯ ಪಯಣ (ಶಕ್ತಿ), ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ (ಗೃಹ ಲಕ್ಷ್ಮಿ), ಕ್ಷೀರಭಾಗ್ಯಕ್ಕೆ ಹತ್ತರ ಸಂಭ್ರಮ, ಯುವಕರ ಶ್ರೇಯೋಭಿವೃದ್ಧಿ (ಯುವ ನಿಧಿ), ಜನಸ್ಪಂದನ, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಹೀಗೆ ವಿವಿಧ ಯೋಜನೆಗಳ ಕುರಿತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್ ಉಪಸ್ಥಿತರಿದ್ದರು.