ಹನೂರಿನಲ್ಲಿ ಪಿಂಚಣಿ ಸೌಲಭ್ಯಕ್ಕಾಗಿ ನಕಲಿ ಆದೇಶ ಪ್ರತಿ: ದೂರು ಸಲ್ಲಿಕೆ

KannadaprabhaNewsNetwork |  
Published : Sep 21, 2024, 01:55 AM IST
20ಸಿಎಚ್‌ಎನ್‌59ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಂಪತಿಗಳಿಬ್ಬರು ನಕಲಿ ಪಿಂಚಣಿ ಆದೇಶ ಪ್ರತಿಗಳನ್ನು ನೀಡಿರುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಗ್ರೇಡ್ 2 ತಹಸಿಲ್ದಾರ್ ಧನಂಜಯ ಅವರಿಗೆ ಮನವಿ ಪತ್ರ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ರಾಮಾಪುರ ಪೊಲೀಸ್ ಠಾಣೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹನೂರಿನಲ್ಲಿ ದೂರು ಸಲ್ಲಿಸಿದ್ದಾರೆ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ರಾಮಾಪುರ ಪೊಲೀಸ್ ಠಾಣೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಿಕಾಪುರ ಗ್ರಾಮದ ತೋಟದ ಮನೆಯ ದಂಪತಿಗಳಿಬ್ಬರು ಗುಂಡಾಪುರ, ಮಂಚಾಪುರ, ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ವೃದ್ಧರಿಗೆ ಪಿಂಚಣಿ ಸವಲತ್ತು ಕಲ್ಪಿಸಿ ಕೊಡುವುದಾಗಿ 2022 ಕೊರೋನಾ ಇದ್ದಂತ ಸಂದರ್ಭದಲ್ಲಿ ನೂರಾರು ಜನರ ಹತ್ತಿರ ಪಿಂಚಣಿ ಸೌಲಭ್ಯಕ್ಕಾಗಿ ಪ್ರತಿಯೊಬ್ಬರ ಬಳಿ, 6000, 8000 ರು. ಹಣವನ್ನು ಪಡೆದು ಬೆಂಗಳೂರಿನ ವಿಳಾಸವಿರುವ ವ್ಯಕ್ತಿಗಳ ಪಿಂಚಣಿ ಆದೇಶ ಪ್ರತಿಗೆ ಇಲ್ಲಿನ ಫಲಾನುಭವಿಗಳ ಹೆಸರನ್ನು ಸೇರಿಸಿ ನಕಲಿ ಪಿಂಚಣಿ ಆದೇಶ ಪ್ರತಿಗಳನ್ನು 2023ರಲ್ಲಿ ಈ ಭಾಗದ ಜನತೆಗೆ ನೀಡುವ ಮೂಲಕ ಏನು ತಿಳಿಯದ ಮುಗ್ಧ ಜನತೆಗೆ ವಂಚಿಸಿ ದಂಪತಿಗಳಿಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಪಿಂಚಣಿ ಸಿಗದೆ ಪರದಾಟ:

ಈ ಭಾಗದ ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಹಣ ಪಡೆದು ನಕಲಿ ಪಿಂಚಣಿ ಆದೇಶ ಪ್ರತಿ ಇಟ್ಟುಕೊಂಡು ಫಲಾನುಭವಿಗಳು ಇಂದು ನಾಳೆ ಹಣ ಬರುತ್ತದೆ ಎಂದು ಹಿರಿಯ ನಾಗರಿಕರು ವಿಧವಾ ವೇತನ, ಸಂಧ್ಯಾ ಸುರಕ್ಷಾ ಇನ್ನಿತರ ಆದೇಶ ಪ್ರತಿಗಳನ್ನು ಇಟ್ಟುಕೊಂಡು ಫಲಾನುಭವಿಗಳು ಪಿಂಚಣಿ ಹಣಕ್ಕಾಗಿ ಪರದಾಡಿದ ಘಟನೆಯಿಂದ ಈ ಪ್ರಕರಣ 2024ರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ರೈತ ಸಂಘಟನೆ ಕ್ರಮಕ್ಕೆ ಒತ್ತಾಯ:

ನೂರಾರು ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ದಂಪತಿಗಳಿಬ್ಬರು ಹಣ ಪಡೆದು 2022 ರಲ್ಲಿ ನೀಡಿರುವ ನಕಲಿ ಆದೇಶ ಪ್ರತಿಗಳನ್ನು 2024ರಲ್ಲಿ ಫಲಾನುಭವಿಗಳಿಂದ ಬೆಳಕಿಗೆ ಬಂದಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟಣದ ತಾಲೂಕು ದಂಡಾಧಿಕಾರಿಗಳಿಗೆ ನಕಲಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ನಕಲಿ ಆದೇಶ ಪ್ರತಿಗಳನ್ನು ಪಡೆದಿರುವ ವ್ಯಕ್ತಿಗಳ ಮೇಲೆ ರಾಮಪುರ ಪೊಲೀಸ್ ಠಾಣೆಯಲ್ಲಿ ಈ ನಕಲಿ ಪಿಂಚಣಿ ಆದೇಶ ಪ್ರತಿಗಳನ್ನು ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಇಂತಹ ಪ್ರಕರಣಗಳಿಗೆ ಅವಕಾಶ ನೀಡದೆ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಸಾರ್ವಜನಿಕ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ಸೌವಲತ್ತು ಪಡೆಯಬೇಕಾಗಿದೆ. ಇನ್ನೂ ಮುಂದಾದರು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

ಧನಂಜಯ್, ಗ್ರೇಡ್ 2, ತಹಸೀಸಿಲ್ದಾರ್ ಹನೂರು

ತಾಲೂಕು ಆಡಳಿತ ವತಿಯಿಂದ ನಕಲಿ ಪಿಂಚಣಿ ಆದೇಶ ನೀಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು.ಈಶ್ವರ್, ಸಬ್ಇನ್ಸ್‌ಪೆಕ್ಟರ್ ರಾಮಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಜ ಕೃಷಿ; ಆನಂದಮಯ ಜೀವನಕ್ಕೆ ದಾರಿ ಕುರಿತು 3 ದಿನಗಳ ತರಬೇತಿ
ಸಿದ್ದರಾಮಯ್ಯ ಪರ, ವಿರುದ್ಧ ಡಿನ್ನರ್ ಮೀಟಿಂಗ್‌ಗೆ ಸೀಮಿತ