ಕನ್ನಡ ರಾಜ್ಯೋತ್ಸವ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 20ನೇ ದಿನದ ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪ, ಬಿ.ಎಂ.ಶ್ರೀಕಂಠಯ್ಯ ಅವರ ಕುರಿತು ಮಾತನಾಡಿದರು.
ಡಿ.ವಿ.ಗುಂಡಪ್ಪ ಅವರು ಆಧುನಿಕ ಕನ್ನಡ ಸಾಹಿತ್ಯದ ದಿಗ್ಗಜರು. ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದರು. ಭಾರತ್ ಮತ್ತು ಕರ್ನಾಟಕ ಎಂಬ ಕನ್ನಡ ಪತ್ರಿಕೆ ಪ್ರಾರಂಭಿಸಿದರು ಕನ್ನಡ ಸಾಹಿತ್ಯ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಬಿ.ಎಂ.ಶ್ರೀಕಂಠಯ್ಯನವರ ಸಾಹಿತ್ಯ ರಚನೆಗಳೆಲ್ಲವೂ ಕೂಡ ಹೊಸಗನ್ನಡ ಸಾಹಿತ್ಯಕ್ಕೆ, ರಮ್ಯ ಕಲ್ಪನೆಗೆ, ನವೋದಯ ಸಾಹಿತ್ಯಕ್ಕೆ ನಾಂದಿಹಾಡಿದರು. ಹೊಸಗನ್ನಡ ಸಾಹಿತ್ಯವನ್ನು ಬೇರೆಬೇರೆ ಪ್ರಕಾರಗಳಾಗಿ ವಿಂಗಡಿಸುತ್ತೇವೆ. ನವೋದಯ ಸಾಹಿತ್ಯ, ಪ್ರಗತಿಶೀಲನಾ ಸಾಹಿತ್ಯ, ನವ್ಯ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ. ಸಾಹಿತ್ಯದ ರಚನೆಗಳನ್ನು ಬೇರೆಬೇರೆ ರೂಪದಲ್ಲಿ ಕಾಣುತ್ತೇವೆ ಎಂದು ಹೇಳಿದರು.
ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ, ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ತಮಿಳು ಸಂಘದ ಜಗದೀಶ್, ಬಸವರಾಜನಾಯಕ, ನಿಜಧ್ವನಿ ಗೋವಿಂದರಾಜು, ನಂಜುಂಡಶೆಟ್ಟಿ, ಮಹೇಶ್ ಗೌಡ, ವೀರಭದ್ರ,ರಾಚಪ್ಪ, ಶಿವಣ್ಣ, ಶಿವಲಿಂಗಮೂರ್ತಿ, ಮಹದೇವಯ್ಯ ಹಾಜರಿದ್ದರು.