ಶಿಕ್ಷಣ, ಸಂಸ್ಕೃತಿ ಮತ್ತು ಸಂಸ್ಕಾರ ನೆಮ್ಮದಿ ಕೊಡಬಲ್ಲವು: ತಮ್ಮಯ್ಯ

KannadaprabhaNewsNetwork |  
Published : Mar 08, 2026, 02:00 AM IST
5ಕೆಕೆಡಿಯು3. | Kannada Prabha

ಸಾರಾಂಶ

ಕಡೂರು ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿ ಕೊಟ್ಟಲ್ಲಿ ಮಾತ್ರ ಮಕ್ಕಳನ್ನು ನಾವು ಉತ್ತಮ ಪ್ರಜೆಗಳನ್ನು ರೂಪಿಸಬಹುದು ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.

ದೇವನೂರಿನ ಸರ್ಕಾರಿ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಪೂಜೆಕನ್ನಡಪ್ರಭ ವಾರ್ತೆ, ಕಡೂರು

ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿ ಕೊಟ್ಟಲ್ಲಿ ಮಾತ್ರ ಮಕ್ಕಳನ್ನು ನಾವು ಉತ್ತಮ ಪ್ರಜೆಗಳನ್ನು ರೂಪಿಸಬಹುದು ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು. ಗುರುವಾರ ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿ ದೇವನೂರು ಕವಿಗಳನ್ನು ಮತ್ತು ಪುರಾತನ ದೇವಾಲಯ ಗಳನ್ನು ಕೊಟ್ಟಿದೆ. ಇಂತಹ ಗ್ರಾಮದಲ್ಲಿ ಉತ್ತಮ ಶಾಲೆ ಇದೆ. ಆದರೆ ಕೊಠಡಿಗಳ ಕೊರತೆಯಿದ್ದು, ಅದನ್ನು ನೀಗಿಸುವ ನಿಟ್ಟಿನಲ್ಲಿ ವಿಶೇಷ ಅನುದಾನದಡಿ ₹50 ಲಕ್ಷ ಮಂಜೂರು ಮಾಡಿಸಿದ್ದು, ಇದರಿಂದ ಸುಸಜ್ಜಿತ ನಾಲ್ಕು ಕೊಠಡಿಗಳು ಜೊತೆಗೆ ಪ್ರತ್ಯೇಕ ಎರಡು ಶೌಚಾಲಯ ಮಾಡುತ್ತಿದ್ದು ಅನುದಾನ ಕಡಿಮೆಯಾದಲ್ಲಿ ಮತ್ತೆ ಹೆಚ್ಚುವರಿ ಅನುದಾನ ಕೊಡಲಾಗುವುದು.

ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ. ಕಳೆದ ಸಾಲಿನಲ್ಲಿ ಜೂ.21ರ ನನ್ನ ಹುಟ್ಟು ಹಬ್ಬದ ದಿನದಂದು ಹಿರೇಮ ಗಳೂರಿನ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಹುಟ್ಟುಹಬ್ಬ ಆಚರಿಸಲಾಗಿತ್ತು. ಅದೇ ರೀತಿ ಬರುವ ಜೂ. 21 ರಂದು ದೇವನೂರಿನ ಶಾಲೆಯಲ್ಲಿ ನೂತನ ಕಟ್ಟಡದ ಉದ್ಘಾಟನೆ ಮೂಲಕ ಆಚರಿಸುತ್ತೇನೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಬಿಇಒ ಬದ್ರುದ್ದೀನ್ ಚೋಪ್ದಾರ್ ಮಾತನಾಡಿ, ಈ ಶಾಲೆ ಮಾದರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗಿದೆ. ಶಾಸಕರು ಕೊಠಡಿ ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಎಚ್. ಆರ್. ಮಹಾಲಿಂಗಪ್ಪ ಮಾತನಾಡಿ, ನಮ್ಮ ಶಾಲೆಗೆ ಇತಿಹಾಸವಿದೆ. ಮಕ್ಕಳ ಹಾಜರಾತಿಯೂ ಇದೆ. ಆಂಗ್ಲ ಮಾಧ್ಯಮ ಪ್ರಾರಂಭವಾಗಿ ₹50 ಲಕ್ಷ ರೂ ಶಾಸಕರ ನಿಧಿಯಲ್ಲಿ 4 ಕೊಠಡಿಗಳು ನಿರ್ಮಾಣವಾಗುತ್ತಿರುವುದು ಶಿಕ್ಷಣಕ್ಕೆ ಆದ್ಯತೆ ನೀಡಿದಂತಾಗಿದೆ ಎಂದರು. ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ಸದಸ್ಯರಾದ ಮಂಜು, ಶಶಿಕಲಾ, ಆನಂದ್, ನಿರ್ಮಿತಿ ಕೇಂದ್ರದ ಚಂದ್ರಶೇಖರ್, ಮುಖಂಡರಾದ ಬಸವ ರಾಜು, ಕುಮಾರ್, ಮುಖ್ಯ ಶಿಕ್ಷಕ ಮಂಜಾನಾಯ್ಕ, ಪರಮೇಶ್, ಪ್ರೇಮಕುಮಾರಿ. ಗ್ರಾಮಸ್ಥರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು. 5ಕೆಕೆಡಿಯು3.

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ದೇವನೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಎಚ್. ಡಿ. ತಮ್ಮಯ್ಯ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆಯ ಮಾಲಿನ್ಯದಿಂದ ಕೃಷಿ ವಲಯಕ್ಕೆ ಬಿಕ್ಕಟ್ಟು; ಕ್ರಮಕ್ಕೆ ಆಗ್ರಹ
ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಎಸಿ ವ್ಯವಸ್ಥೆಯೇ ಇಲ್ಲ