ವಿಘ್ನೇಶ್ ಎಂ. ಭೂತನಕಾಡು
ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗುತ್ತಿರುವ ಬಭ್ರುವಾಹನ (ಕರಡಿ) ಹಾಗೂ ರಾಜನ್(ಸೀಗೆಗುಡ್ಡ) ಆನೆಗಳು ಈಗಾಗಲೇ ಕ್ರಾಲ್ನಲ್ಲಿ ಪಳಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಕ್ರಾಲ್ನಿಂದ ಹೊರ ಬರಲಿವೆ. ಮಳೆ ಕಾರಣದಿಂದ ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಲಿದೆ.
ಈಗಾಗಲೇ ಈ ಎರಡೂ ಆನೆಗಳು ಕೂಡ ಮಾವುತರ ಶಿಸ್ತಿನ ಪಾಠ ಕಲಿತಿದ್ದು, ಕ್ರಾಲ್ ನಿಂದ ಹೊರ ಬರಲು ಸಜ್ಜಾಗಿವೆ. ಸೆರೆ ಹಿಡಿಯುವ ವೇಳೆ ಭಾರಿ ಆವೇಶ ಹಾಗೂ ಸಿಟ್ಟಿನಿಂದ ಇದ್ದ ಈ ಕಾಡಾನೆಗಳು, ಈಗ ಶಾಂತ ರೂಪಕ್ಕೆ ಬದಲಾಗಿವೆ.ಹಾಸನ ಜಿಲ್ಲೆಯಲ್ಲಿ ಭಾರಿ ಉಪಟಳ ನೀಡುತ್ತಿದ್ದ ಬಲಿಷ್ಠ ಕಾಡಾನೆ ಕರಡಿಯನ್ನು(ಮೊದಲ ಹೆಸರು) ಕಳೆದ ಮೂರು ತಿಂಗಳ ಹಿಂದೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಭೀಮ, ಹರ್ಷ, ಪ್ರಶಾಂತ, ಸುಗ್ರೀವ, ಧನಂಜಯ, ಅಶ್ವತ್ಥಾಮ ಹಾಗೂ ಮಹೀಂದ್ರ ಆನೆಗಳ ನೆರವಿನಿಂದ ಬೇಲೂರು ತಾಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿತ್ತು. ಇದಕ್ಕೆ ಈಗ ಬಭ್ರುವಾಹನ ಎಂದು ಅರಣ್ಯ ಇಲಾಖೆ ಈಗ ನಾಮಕರಣ ಮಾಡಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಸೀಗೆಗುಡ್ಡ ಹೆಸರಿನ ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಈ ಆನೆ ಸಕಲೇಶಪುರ ಭಾಗದಲ್ಲಿ ಜನರಿಗೆ ಹಾಗೂ ಕೃಷಿ ಜಮೀನಿಗೆ ತೆರಳಿ ಹೆಚ್ಚಿನ ಉಪಟಳ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂದು ಸಾಕಾನೆಗಳಿಂದ ಸೆರೆ ಹಿಡಿಯಲಾಗಿತ್ತು. ಇದಕ್ಕೆ ರಾಜನ್ ಎಂದು ಇಲಾಖೆಯಿಂದ ಹೆಸರಿಡಲಾಗಿತ್ತು. ಈ ಎರಡೂ ಆನೆಗಳಿಗೆ ಕೂಡ ಪ್ರತಿ ದಿನ 30 ಕೆ.ಜಿ ಭತ್ತ, 300 ಕೆ.ಜಿ. ಸೊಪ್ಪುಗಳನ್ನು ನೀಡಲಾಗುತ್ತಿದೆ.
ಆರಂಭದಲ್ಲಿ ರಂಪಾಟ:
ಆನೆ ಸೆರೆಗೆ ಬಳಕೆ:
ಅಲ್ಲದೆ ಮುಂಬರುವ ವರ್ಷಗಳಲ್ಲಿ ಮೈಸೂರು ದಸರಾ ಉತ್ಸವಕ್ಕೆ ಭಾಗವಹಿಸುವಂತೆ ಈ ಆನೆಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಈ ಎರಡೂ ಆನೆಗಳು ನಮ್ಮ ಶಿಬಿರದಲ್ಲಿ ಈಗಾಗಲೇ ಮೂರು ತಿಂಗಳಿಂದ ಕ್ರಾಲ್ನಲ್ಲಿ ಪಳಗುತ್ತಿವೆ. ಮಾವುತನ ಮಾತುಗಳನ್ನು ಕೇಳಲಾರಂಭಿಸಿದೆ. ಆನೆಗೆ ಯಾವುದೇ ಗಾಯ ಇಲ್ಲ, ಆರೋಗ್ಯಕರವಾಗಿದೆ. ಮಳೆ ಕಳೆದ ನಂತರ ಎರಡೂ ಆನೆಗಳನ್ನು ಹೊರಬಿಡಲು ಸಿದ್ಧತೆ ಮಾಡಲಾಗುತ್ತಿದೆ.
.............ದುಬಾರೆಯಲ್ಲಿ ಪಳಗುತ್ತಿರುವ ಬಭ್ರುವಾಹನ ಹಾಗೂ ರಾಜನ್ ಆನೆಗಳನ್ನು ಕೆಲವೇ ದಿನಗಳಲ್ಲಿ ಕ್ರಾಲ್ನಿಂದ ಹೊರ ಬಿಡಲಾಗುವುದು. ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಸೂಚನೆ ನೀಡುತ್ತಾರೆ. ಅದಾದ ಬಳಿಕ ಹೊರ ಬಿಡಲಾಗುವುದು.
-ಧರ್ಮೇಂದ್ರ, ಅರಣ್ಯಾಧಿಕಾರಿ.