ಕನ್ನಡಪ್ರಭ ವಾರ್ತೆ ಭಾರತೀನಗರ
ಸಂಜೆ ದೇವಾಲಯದಲ್ಲಿ ಪುಣ್ಯಾಹ ಪೂಜಾ ರಕ್ಷಾಬಂಧನ, ಗಣಪತಿ ಹೋಮ, ನವಗ್ರಹ ಹೋಮ, ಸೇರಿದಂತೆ ಮತ್ತಿತರ ಪೂಜಾ ಕಾರ್ಯಗಳು ನಡೆದವು. ನಂತರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯಿಂದ ರಾತ್ರಿ 7 ಗಂಟೆಗೆ ಆನೆ, ಪೂಜೆ, ಸತ್ತಿಗೆ ಮೆರವಣಿಗೆ ಆರಂಭವಾಯಿತು.
ಗ್ರಾಮದ ರಾಮ ಮಂದಿರದ ಮುಂದಿನ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಹೊಲಮಾಳದ ಹುಚ್ಚಮ್ಮ ದೇವಿ ದೇವಾಲಯದಲ್ಲಿ ಪೂಜೆ ಪಡೆದು, ಮಾರಮ್ಮನ ದೇವಾಲಯದ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಾಗಿ ಹಟ್ಟಿ ಮಾರಮ್ಮನ ದೇವಾಲಯ ತಲುಪಿತು.ಇದೇ ಮೊದಲ ಬಾರಿಗೆ ದೇವರ ಕಾರ್ಯಕ್ಕೆ ಆನೆ ಆಗಮಿಸಿದ್ದು, ಆನೆಯನ್ನು ನೋಡಲು ಜನರ ದಂಡೇ ನೆರೆದಿತ್ತು. ಜನರು ಆನೆ ಹಾಗೂ ದೇವರಿಗೆ ಆರತಿ ನೀಡಿ ಭಕ್ತಿ ಪ್ರದರ್ಶಿಸಿದರು. ನಂತರ ಆನೆ ಹಟ್ಟಿ ಮಾರಮ್ಮ ದೇವಾಲಯದ ಆವರಣದಲ್ಲಿ ವಿಶ್ರಾಂತಿ ಪಡೆಯಿತು. ಪೂಜೆ ಹಾಗೂ ಸತ್ತಿಗೆಯನ್ನು ಇಳಿಸಲಾಯಿತು.
ನ.26 ರಂದು ಸಂವಿಧಾನ ಮೆರವಣಿಗೆ ಮತ್ತು ಜಾಗೃತಿ ಕಾರ್ಯಕ್ರಮ: ಹುಲ್ಕೆರೆ ಮಹದೇವು
ಭಾರತ ಸಂವಿಧಾನ ಸಮರ್ಪಣಾ ದಿನದ ಅಮೃತ ಮಹೋತ್ಸವದ ಅಂಗವಾಗಿ ನ.26 ರಂದು ಸಂವಿಧಾನ ಮೆರವಣಿಗೆ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ದಲಿತ ಮುಖಂಡ ಹುಲ್ಕೆರೆ ಮಹದೇವು ತಿಳಿಸಿದರು.
ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಕ್ಕಾ ಹಾಗೂ ಐ.ಎ.ಎಸ್ ಅಕಾಡೆಮಿಯ ಮುಖ್ಯಸ್ಥ ಡಾ.ಶಿವಕುಮಾರ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.