ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಿ

KannadaprabhaNewsNetwork |  
Published : Aug 21, 2025, 01:00 AM IST
೨೦ಕೆಎಲ್‌ಆರ್-೨ಕೋಲಾರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಕೋಮುಲ್ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಹಾಲು ಉತ್ಪಾದನೆ ಹೆಚ್ಚಿಸಲು ಪಣ ತೊಡಬೇಕಿದ್ದು, ಅದಕ್ಕಾಗಿ ಪ್ರತಿ ಮನೆಗೊಂದು ಹಸು ಇರಬೇಕು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುವ ಮಾಹಿತಿ ಆಲಿಸಿ ಹಾಲು ಉತ್ಪಾದನೆಯಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಗುಣಮಟ್ಡದ ಹಾಲು ನೀಡುವ ಶಪಥ ಮಾಡಿದರೆ ಎಲ್ಲರಿಗೂ ಅನುಕೂಲ.

ಕನ್ನಡಪ್ರಭ ವಾರ್ತೆ ಕೋಲಾರಹೈನುಗಾರಿಕೆಯು ನಮ್ಮ ಕಸುಬಾಗಿದ್ದು, ಅದರಿಂದಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಹೈನುಗಾರಿಕೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಸಲುವಾಗಿ ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಿ ಎಂದು ಕೋಮುಲ್ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಹೇಳಿದರು.ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಒಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಉತ್ಪಾದನೆ ಹೆಚ್ಚಿಸಲು ಪಣ

ಹಾಲು ಉತ್ಪಾದನೆ ಹೆಚ್ಚಿಸಲು ಪಣ ತೊಡಬೇಕಿದ್ದು, ಅದಕ್ಕಾಗಿ ಪ್ರತಿ ಮನೆಗೊಂದು ಹಸು ಇರಬೇಕು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುವ ಮಾಹಿತಿ ಆಲಿಸಿ ಹಾಲು ಉತ್ಪಾದನೆಯಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕೋಮುಲ್ ನಿರ್ದೇಶಕಿ ಮಹಾಲಕ್ಷ್ಮೀ ಪ್ರಸಾದ್ ಬಾಬು ಮಾತನಾಡಿ, ನಮ್ಮ ಒಕ್ಕೂಟವನ್ನು ರಾಜ್ಯದಲ್ಲೇ ಮೊದಲನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಪಣ ತೊಡಬೇಕಿದೆ, ರೈತರು ಎಲ್ಲ ಬೆಳೆಗಳಲ್ಲಿ ನಷ್ಟ ಹೊಂದುತ್ತಿದ್ದಾರೆ, ಹಾಲಿನಲ್ಲಿ ಲಾಭ ಪಡೆಯುತ್ತಿದ್ದು, ಪಶುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಎಂದು ಸಲಹೆ ಮಾಡಿದರು.೧೦ ಲಕ್ಷ ಲೀಟರ್ ಉತ್ಪಾದನೆ ಗುರಿಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್.ಗೋಪಾಲಮೂರ್ತಿ ಮಾತನಾಡಿ, ಒಕ್ಕೂಟ ವಿಭಜನೆಗೂ ಮೊದಲು ೧೨ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ವಿಭಾಗವಾದ ಬಳಿಕ ಈಗ ನಾವು ೬ನೇ ಸ್ಥಾನಕ್ಕೆ ಹೋಗಿದ್ದೇವೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಮುಂದೆ ಇದ್ದು, ನಿಮ್ಮ ಸಹಕಾರ, ಸಹಾಯದಿಂದ ವರ್ಷದಲ್ಲಿ ೧೦ ಲಕ್ಷ ಲೀಟರ್ ಗುರಿ ಸಾಧಿಸಬೇಕಿದೆ ಎಂದರು.ಗುಣಮಟ್ಟದ ಹಾಲು ಪೂರೈಸಿ

ತರಬೇತಿ ಕಾರ್ಯಾಗಾರದಿಂದ ಸಾಕಷ್ಟು ಅನುಕೂಲತೆಗಳಿವೆ. ಅವುಗಳನ್ನು ಅಳವಡಿಸಿಕೊಂಡರೆ ಸಂಘಗಳೂ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಗುಣಮಟ್ಡದ ಹಾಲು ನೀಡುವ ಶಪಥ ಮಾಡಿದರೆ ಎಲ್ಲರಿಗೂ ಅನುಕೂಲ ಎಂದು ಹೇಳಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಡಿ.ಆರ್.ರಾಮಚಂದ್ರೇ ಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಪಿ.ಎಂ.ವೆಂಕಟೇಶ್, ಎಸ್.ವಿ.ಗೋವರ್ಧನರೆಡ್ಡಿ, ಎನ್.ನಾಗರಾಜ್, ವಿ.ರಘುಪತಿರೆಡ್ಡಿ, ಶಂಕರನಾರಾಯಣಗೌಡ ಎನ್, ಕೆ.ಎಂ.ಮಂಜುನಾಥ್, ವಿ.ಪಾಪಣ್ಣ, ಕೆ.ಎಂ.ವೆಂಕಟೇಶಪ್ಪ, ಶೇಖ್ ಮಹಮದ್, ಕೋಲಾರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಚೇತನ್ ಎಂ.ಪಿ, ಉಪ ವ್ಯವಸ್ಥಾಪಕಿ ಸ್ಟೆಫ್ ವಿಭಾಗದ ವಿಜಯಲಕ್ಷ್ಮಿ.ಆರ್, ನಳಿನಿ, ಮಂಜುನಾಥಯ್ಯ, ಒಕ್ಕೂಟದ ಸಿಇಒ ಕೆ.ಎಂ.ಭಾರತಿ ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ