ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಿಎಲ್ಆರ್ಸಿ ಬ್ಯಾಂಕರ್ ಸಭೆಯಲ್ಲಿ ಮಾತನಾಡಿದ ಅವರು, ಪಿಎಂ-ವಿಶ್ವಕರ್ಮ ಪ್ರಧಾನ ಮಂತ್ರಿಯವರ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಂಜೂರಾದ ಎಷ್ಟು ಫಲಾನುಭವಿಗಳಿಗೆ ತರಬೇತಿ ಆಗಿದೆ. ಯಾವ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗಿದೆ. ಹಾಗೂ ಬ್ಯಾಂಕುಗಳಲ್ಲಿ ಶೇ.50 ರಷ್ಟು ಅರ್ಜಿಗಳು ತಿರಸ್ಕೃತವಾಗಲು ಕಾರಣ ಏನೆಂದು ಒಂದು ವಾರ ದೊಳಗೆ ಮಾಹಿತಿ ನಿಡಬೇಕು ಎಂದು ಸೂಚನೆ ನೀಡಿದರು.
ಗೋವಿಂದಾಪುರದಲ್ಲಿ ವಸತಿ ಯೋಜನೆಯಡಿ ಕೆನರಾ ಬ್ಯಾಂಕ್, ಎಸ್ಬಿಐ ಸೇರಿದಂತೆ ಸಾಲಕ್ಕೆ 390 ಅರ್ಜಿಗಳು ಬಾಕಿ ಇದ್ದು, ಬ್ಯಾಂಕುಗಳು ದಸರಾ ಹಬ್ಬ ದೊಳಗೆ ಅವುಗಳನ್ನು ವಿಲೇ ಮಾಡಬೇಕು. ಆಯುಧ ಪೂಜೆಯಂದು ವಸತಿ ಸಾಲ ಸೌಲಭ್ಯವನ್ನು ವಿತರಣೆ ಮಾಡೋಣ ಎಂದರು.ಸಂಸದರು, ಬ್ಯಾಂಕುಗಳಲ್ಲಿ ಬಾಕಿ ಇರುವ ಪಿಎಂ-ಸ್ವನಿಧಿ, ಮುದ್ರಾ, ಸ್ಟ್ಯಾಂಡ್ ಅಪ್, ಪಿಎಂಎಫ್ಎಂಇ ಯೋಜನೆಯ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಹಾಗೂ ಪಿಎಂ-ಸುರಕ್ಷ ಬಿಮಾ ಯೋಜನೆಯ ಗುರಿಯನ್ನು ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ನೀಡುವಲ್ಲಿ ಫೈನಾನ್ಶಿಯಲ್ ಲಿಟರೆಸಿ ಕ್ಯಾಂಪ್ ನಡೆಸುವಲ್ಲಿ ಬ್ಯಾಂಕುಗಳು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಬರುವ ಸೋಮವಾರದಂದು ವಸತಿ ಸಾಲ ಸೇರಿದಂತೆ ಇತರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಪ್ರತಿ ತಿಂಗಳು 3 ನೇ ಶನಿವಾರದಂದು ಕಾರ್ಯಕ್ರಮ ಆಯೋಜಿಸಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉಪ ನಿರ್ದೇಶಕ ಸುರೇಶ್ ಮಾತನಾಡಿ, ಪಿಎಂ ಸ್ವನಿಧಿ ಸಾಲ ಯೋಜನೆಯಡಿ ಮೊದಲ ಹಂತದ ಸಾಲ ರು.10 ಸಾವಿರ ನೀಡುವಲ್ಲಿ ಶೇ.75, ಎರಡನೇ ಹಂತದ ರು.20 ಸಾವಿರ ನೀಡುವಲ್ಲಿ ಶೇ.101 ಮತ್ತು ಮೂರನೇ ಹಂತದ ರು.50 ಸಾವಿರ ನೀಡುವಲ್ಲಿ ಶೇ.158 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಡಿಜಿಎಂ ಆರ್.ದೇವರಾಜ್ ಮಾತನಾಡಿ, ಜಿಲ್ಲೆಯು ಸಿಡಿ ಅನುಪಾತದಲ್ಲಿ ಸುಧಾರಣೆ ಕಂಡಿದೆ. ಶೇ.75.82 ರಿಂದ ಶೇ.80.11 ವರೆಗೆ ಸುಧಾರಣೆ ಆಗಿದೆ. ಕೃಷಿ ಕ್ಷೇತ್ರದಲ್ಲಿ ಈ ಮಾಹೆವರೆಗೆ ಶೇ.31.71, ಎಂಎಸ್ಎಂಇ ಶೇ.42.84, ಶಿಕ್ಷಣ ಸಾಲ ಶೇ.13.60 ವಸತಿ ಶೇ.28.77, ಒಟ್ಟಾರೆ ಆದ್ಯತಾ ಮತ್ತು ಆದ್ಯತಾ ರಹಿತ ವಲಯದಲ್ಲಿ ಶೇ.36.96 ಪ್ರಗತಿ ಸಾಧಿಸಿದ್ದು, ವಿಶ್ವಕರ್ಮ, ಕೃಷಿ, ಶಿಕ್ಷಣ ಇತರೆ ಕ್ಷೇತ್ರಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಬ್ಯಾಂಕುಗಳು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಚಂದ್ರಶೇಖರ್ ಸ್ವಾಗತಿಸಿದರು. ಆರ್ಬಿಐ ಎಲ್ಡಿಓ ವೆಂಕಟರಾಮ್, ನಬಾರ್ಡ್ ಡಿಡಿಎಂ ಶರತ್ ಗೌಡ ಪಿ, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಜರಿದ್ದರು.