ಹೊಸಕೋಟೆ: ಜೆಡಿಎಸ್ ಪರಿಶಿಷ್ಟ ರಾಜ್ಯ ಘಟಕಕ್ಕೆ ಎರಡನೇ ಬಾರಿಗೆ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ. ಕೆ.ಅನ್ನದಾನಿ ಅವರಿಗೆ ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಜಾನಕಿಪ್ರಸಾದ್ ನೇತೃತ್ವದಲ್ಲಿ ಕಾರ್ಯಕರ್ತರು ಅಭಿನಂದಿಸಿರು.
ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಜಾನಕಿಪ್ರಸಾದ್ ಮಾತನಾಡಿ, ಡಾ.ಕೆ.ಅನ್ನದಾನಿ ಅವರು ಈ ಹಿಂದೆ ಶಾಸಕರಾಗಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹೋರಾಟ ಹಾಗೂ ಸಂಘಟನೆಯ ಚತುರತೆಯನ್ನು ಗಮನಿಸಿ, ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಅವರಿಗೆ ಪರಿಶಿಷ್ಟ ಘಟಕದ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರ ಮೂಲಕ ದಲಿತರನ್ನ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯ ತಾಲೂಕು ಹೋಬಳಿ ಘಟಕದ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಪರಸ್ಪರ ಸಹಕಾರ ನೀಡಬೇಕು. ಎಲ್ಲಾ ವರ್ಗದ ಜನರನ್ನ ಒಗ್ಗೂಡಿಸಿಕೊಂಡು ಪಕ್ಷವನ್ನ ಅಭಿವೃದ್ಧಿಯತ್ತ ಸಾಗಲು ಮುಂದಾಗಬೇಕು ಎಂದರು.
ಜೆಡಿಎಸ್ ರಾಜ್ಯ ಎಸ್ಸಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ವೆಂಕಟಾಚಲಪತಿ, ಬೆಂಗಳೂರು ನಗರ ಮುಖಂಡ ಜೈ ಕುಮಾರ್ ಇತರರು ಹಾಜರಿದ್ದರು.ಫೋಟೋ : 21 ಹೆಚ್ಎಸ್ಕೆ 1ಜೆಡಿಎಸ್ ಪರಿಶಿಷ್ಟ ಘಟಕದ ರಾಜ್ಯಾಧ್ಯಕ್ಷರಾಗಿ 2ನೇ ಬಾರಿಗೆ ಆಯ್ಕೆಯಾದ ಡಾ.ಕೆ.ಅನ್ನದಾನಿ ಅವರನ್ನು ಜೆಡಿಎಸ್ ಕಚೇರಿಯಲ್ಲಿ ಹೊಸಕೋಟೆ ತಾಲೂಕಿನ ಜಾನಕಿ ಪ್ರಸಾದ್ ಹಾಗೂ ಕಾರ್ಯಕರ್ತರು ಅಭಿನಂದಿಸಿದರು.