ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆಯರ ಭದ್ರತೆ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಅಗತ್ಯವಾಗಿದೆ ಎಂದು ಶಕ್ತಿ ವಂದನ ಕಾರ್ಯಕ್ರಮದ ಉಸ್ತುವಾರಿ ಸುಜಾತ ಶಿಂಧೆ ಹೇಳಿದರು.ಬಾಗಲಕೋಟೆ ಬ್ಲಾಕ್ ಬಿಜೆಪಿ ವತಿಯಿಂದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಕ್ತಿ ವಂದನ ಅಭಿಯಾನ-2024 ಕಾರ್ಯಕ್ರಮಕ್ಕೆ ಭಾರತ ಮಾತೆಗೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಮಹಿಳೆಯರ ಸಲೀಕರಣಕ್ಕಾಗಿ ಹಾಗೂ ಮಹಿಳೆಯರ ಏಳಿಗೆಗಾಗಿ, ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಲು ನೀಡಿದ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರಲ್ಲದೆ, ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆ ತಲುಪಿಸಿ ಅವುಗಳ ಬಗ್ಗೆ ಅರಿವೂ ಮೂಡಿಸಬೇಕೆಂದರು.ಜಿಲ್ಲಾ ಸಂಚಾಲಕಿ ಅನಿತಾ ಸರೋದೆ ಹಾಗೂ ರಾಜ್ಯ ಪದಾಧಿಕಾರಿ ಭಾಗೀರಥಿ ಪಾಟೀಲ ಮಾತನಾಡಿ, ದೇಶವು ಸರ್ವತೋನ್ಮುಖ ಅಭಿವೃದ್ಧಿಯತ್ತ ಸಾಗಲು ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ದೇಶದ ಸುಭದ್ರತೆ ಕಾಪಾಡುವ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವ ರಾಜಕಾರಿಣಿಗಳನ್ನು ಆರಿಸಿ ತರುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ವಿಷಯ ಪ್ರಮುಖರಾಗಿ ಆಗಮಿಸಿದ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ನರೇಂದ್ರ ಮೋದಿಜಿ ಅವರು ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗಾಗಿ ಶೇ.33ರಷ್ಟು ಮೀಸಲಾತಿ ನೀಡಿರುವುದು ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ನಗರ ಮಂಡಲದ ಅಧ್ಯಕ್ಷ ವಿಜಯಲಕ್ಷ್ಮಿಆಚಾರ, ಭಾಗೀರಥಿ ಪಾಟೀಲ, ಉಮಾ ಚಟ್ಟರಕಿ, ಸವಿತಾ ಲಂಕೆನ್ನವರ, ಸುಜಾತ ತತ್ರಾಣಿ, ಸುವರ್ಣ ಅಂಗಡಿ, ನಗರಸಭಾ ಸದಸ್ಯೆ ಮಹಿಳಾ ವಾರ್ಡ್ ಅಧ್ಯಕ್ಷ ಮಹಿಳಾ ಪದಾಧಿಕಾರಿಗಳು ಹಾಗೂ ಮತಕ್ಷೇತ್ರದ ಮಹಿಳಾ ಕಾರ್ಯಕರ್ತೆಯರು ಭಾಗಿಯಾಗಿದ್ದರು.ಅಭಿಯಾನ ಸಹಸಂಚಾಲಕ ಶಿವಲೀಲಾ ಪಟ್ಟಣಶೆಟ್ಟಿ ನಿರೂಪಿಸಿದರು. ಅಭಿಯಾನ ಸಂಚಾಲಕಿ ಶಶಿಕಲಾ ಮಜ್ಜಗಿ ಸ್ವಾಗತಿಸಿದರು. ಮಂಡಲ ಕಾರ್ಯದರ್ಶಿ ಜಯಶ್ರೀ ಏಕಬೋಟೆ ವಂದಿಸಿದರು.