ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಎಂಜಿನಿಯರ್‌ ಸಂಘ ಬೆಂಬಲ

KannadaprabhaNewsNetwork |  
Published : Jun 03, 2026, 02:00 AM IST
ಪಾಲಿಕೆ ಕಚೇರಿ ಎದುರು ನಡೆಯುತ್ತಿರುವ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಮಂಗಳವಾರ ಫೋರಂ ಆಫ್‌ ಕನ್ಸಲ್ಟಿಂಗ್ ಎಂಜಿನಿಯರ್ಸ್‌ ಬೆಂಬಲ ಸೂಚಿಸಿದರು. | Kannada Prabha

ಸಾರಾಂಶ

ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯಾಗುವುದು ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಅತಿ ಅವಶ್ಯ. ವಿಕೇಂದ್ರಕರಣದಿಂದ ಸರ್ವರಿಗೂ ಸಮಯ ಹಾಗೂ ಖರ್ಚು ಉಳಿತಾಯವಾಗಲಿದೆ.

ಧಾರವಾಡ:

ಕಳೆದ 19 ದಿನಗಳಿಂದ ಇಲ್ಲಿಯ ಪಾಲಿಕೆ ಕಚೇರಿ ಎದುರು ನಡೆಯುತ್ತಿರುವ ಪ್ರತ್ಯೇಕ ಪಾಲಿಕೆಯ ಹೋರಾಟ ನಿರಂತರವಾಗಿದ್ದು, ಮಂಗಳವಾರ ಫೋರಂ ಆಫ್‌ ಕನ್ಸಲ್ಟಿಂಗ್ ಎಂಜಿನಿಯರ್ಸ್‌ ಬೆಂಬಲ ಸೂಚಿಸಿದರು.

ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯಾಗುವುದು ಆಡಳಿತಾತ್ಮಕವಾಗಿ ಸಾರ್ವಜನಿಕರಿಗೆ ಅತಿ ಅವಶ್ಯ. ವಿಕೇಂದ್ರಕರಣದಿಂದ ಸರ್ವರಿಗೂ ಸಮಯ ಹಾಗೂ ಖರ್ಚು ಉಳಿತಾಯವಾಗಲಿದೆ. ಎರಡೂ ಪಾಲಿಕೆಗಳಿಗೆ ಹೆಚ್ಚಿನ ಅನುದಾನ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಈ ಹೋರಾಟಕ್ಕೆ ನಮ್ಮ ಬೆಂಬಲ ಎಂದು ಎಂಜಿನಿಯರ್ಸ್‌ ಹೇಳಿದರು.

ಧಾರವಾಡದ ಅಸ್ಮಿತೆ ವಿಷಯ ಬಂದಾಗ ಒಗ್ಗೂಡಿ ಹೋರಾಟುವುದು ನಮ್ಮ ಧರ್ಮ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಮಾಡದೇ ಒಕ್ಕೂರಲಿನಿಂದ ಧಾರವಾಡ ಜನರ ಬೇಡಿಕೆ ಈಡೇರಿಸಬೇಕೆಂದರು.

ಈ ಸಂದರ್ಭದಲ್ಲಿ ಬಿ.ಡಿ. ಹಿರೇಮಠ, ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಮಹಾದೇವ ಹೊರಟ್ಟಿ, ಗುರುರಾಜ ಹುಣಶಿಮರದ, ವಿಠ್ಠಲ್, ಮೋಹನ ರಾಮದುರ್ಗ, ತುಳಜಪ್ಪ ಪೂಜಾರ, ಈಶ್ವರ ಶಿವಳ್ಳಿ, ರಾಜಶೇಖರ ಕಮತಿ, ವಸಂತ ಅರಕಾಚಾರಿ, ಶಿವಶಂಕರ ಹಪ್ಪಣ್ಣವರ, ಮಲ್ಲಿಕಾರ್ಜುನ ಮುತ್ತಾಳ, ಸತೀಶ ನಾಯ್ಕರ, ಶಿವಾಜಿ ರಾಣೊಜಿ, ಆನಂದ ಹಿರೇಕೇರಿ, ಆನಂದ ದೇಶಮುಖ, ಸಂತೋಷ ಅಂಚಟಗೇರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಲವಾದರೂ ಹಾವೇರಿ ಜಿಲ್ಲೆಗೆ ಸಿಗುತ್ತಾ ಮಂತ್ರಿ ಸ್ಥಾನ?
ಬಳ್ಳಾರಿಯಲ್ಲಿ ಗುಡುಗು-ಸಿಡಿಲು ಸಮೇತ ಮಳೆನೂರಕ್ಕೂ ಅಧಿಕ ಮರಗಳು ಧರೆಗೆ