- ಜಗಳೂರಿನಲ್ಲಿ ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಬಿ.ಆರ್. ರಂಗಪ್ಪ ಮನವಿ । ಸಮೀಕ್ಷೆದಾರರಿಗೆ ಸ್ಪಷ್ಟ ಮಾಹಿತಿ ನೀಡಲು ಮನವಿ - - -
ಜಾತಿ ಗಣತಿಯ ಜಾತಿ ಕಲಂ 9ರಲ್ಲಿ ಉಪ್ಪಾರ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಜಮ್ಮಾಪುರ ಬಿ.ಆರ್. ರಂಗಪ್ಪ ಮನವಿ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಉಪ್ಪಾರ ಸಮಾಜದಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವ್ಯಾಪಿ 2025ನೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ನಡೆಯಲಿದೆ. ಸಮೀಕ್ಷೆದಾರರಿಗೆ ಉಪ್ಪಾರ ಸಮುದಾಯದವರು ಜಾತಿಯನ್ನು ''''''''ಉಪ್ಪಾರ'''''''' ಎಂದು ನಮೂದಿಸಲು ಮಾಹಿತಿ ನೀಡಬೇಕು ಎಂದು ತಿಳಿಸಿದರು.ರಾಜ್ಯದ ಉತ್ತರ, ದಕ್ಷಿಣ, ಮಧ್ಯ ಕರ್ನಾಟಕಗಳಲ್ಲಿ ವಿಭಿನ್ನ ಕಸುಬುಗಳ ಆಧಾರಿತವಾಗಿ ಉಪ್ಪಾರ ಸಮುದಾಯ ವಿಭಜನೆಗೊಂಡು ಸುಣ್ಣ ಉಪ್ಪಾರ, ಉಪ್ಪಳಿಗ ಶೆಟ್ಟಿ, ಗಾವಾಡಿ, ಸುಣಗಾರ, ಸಗರ, ಚುನಾರ, ಲೋನಾರಿ ಎಂದು ಕರೆಯಲಾಗುತ್ತಿದೆ. ಈ ಬಗ್ಗೆ ಗೊಂದಲ ಸೃಷ್ಠಿ ಮಾಡಿಕೊಳ್ಳದೇ ಜಾತಿ ಕಾಲಂ 9ರಲ್ಲಿ ''''''''ಉಪ್ಪಾರ'''''''' ಒಂದುವೇಳೆ ಉಪ ಜಾತಿ ಮೇಲಿನ ಉಪ ಜಾತಿಗಳಿದ್ದಲ್ಲಿ ಮಾತ್ರ ಕಾಲಂ ನಂ.10ರಲ್ಲಿ ಬರೆಸಬೇಕು ಎಂದು ಹೇಳಿದರು.
ಉಪ್ಪಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಗಿಡ್ಡನಕಟ್ಟೆ ಕಾಂತರಾಜ್ ಮಾತನಾಡಿ, ಜಾತಿ ಗಣತಿಯಲ್ಲಿ ಉಪ್ಪಾರ ಸಮಾಜದ ಕೋಡ್ ನಂಬರ್ ಎ 1465 ಆಗಿದೆ. ಯಾವುದೇ ಕಾರಣಕ್ಕೂ 1464 ಬರೆಸಬೇಡಿ. ಅದು ಬಲಿಜ ಜಾತಿಗೆ ಸೇರುತ್ತದೆ. ರಾಜ್ಯದಲ್ಲಿ ಉಪ್ಪಾರ ಸಮುದಾಯದ ನಿರ್ದಿಷ್ಟ ಜನಸಂಖ್ಯೆಯ ಅಂಕಿಸಂಕೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಂವಿಧಾನಬದ್ಧ ಹಕ್ಕುಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಮನವಿ ಮಾಡಿದರು.
- - -
ಜಗಳೂರು ತಾಲೂಕು ಉಪ್ಪಾರ ಸಂಘ ಅಧ್ಯಕ್ಷ ಜಮ್ಮಾಪುರ ಬಿ.ಆರ್.ರಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.