ಮಧುಗಿರಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ

KannadaprabhaNewsNetwork |  
Published : Sep 04, 2025, 01:00 AM IST
ಮಧುಗಿರಿ ತಾಲೂಕು ಕೊಡಿಗೇನಹಳ್ಳಿಯಲ್ಲಿ ಶಾಸಕ ಕೆ.ಎನ್‌.ರಾಜಣ್ಣ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.  | Kannada Prabha

ಸಾರಾಂಶ

ತೆರಿಯೂರು ಸುತ್ತಮುತ್ತ ಕೈಗಾರಿಕಾ ಘಟಕ ಸ್ಥಾಪಿಸಿ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತೆರಿಯೂರು ಸುತ್ತಮುತ್ತ ಕೈಗಾರಿಕಾ ಘಟಕ ಸ್ಥಾಪಿಸಿ ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಬುಧವಾರ ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಜನಸ್ಪಂದನಾ ಹಾಗೂ ವಸತಿ ಮಂಜೂರಾತಿ ಆದೇಶ ಪತ್ರ, ನಿವೇಶನ ಹಕ್ಕುಪತ್ರ, ಇತರೆ ಕಂದಾಯ ಗ್ರಾಮ ಹಕ್ಕು ಪತ್ರ , ಮಾಸಾಶನ, ವಿಧವಾ ಸೌಲಭ್ಯಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ಕಲಿಸಿ ಶ್ರಮಜೀವಿಗಳು ಮಾಡುವ ಕೆಲಸವನ್ನೇ ಮಕ್ಕಳು ಮಾಡಬಾರದು. ವಿದ್ಯಾವಂತರಾಗಿ ಬೇರೆ ಕೆಲಸ ಮಾಡಲಿ ಮಕ್ಕಳಲ್ಲಿ ಸ್ವಾಭಿಮಾನದ ಕಿಟ್ಟು ಹಚ್ಚಬೇಕು. ಕೊಡಿಗೇನಹಳ್ಳಿ ಹೋಬಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ ಪ್ರಾರಂಭಿಸಿದ್ದೇವೆ. ಇಲ್ಲಿ ಕೈಗಾರಿಕೆ ಬೆಳೆಯಲು ಅವಕಾಶ ಕಲ್ಪಿಸಲಾಗಿದ್ದು ಆ ಮೂಲಕ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದರು.

268 ಕೋಟಿ ರು.ವೆಚ್ಚದಲ್ಲಿ ತಾಲೂಕಿನ 45 ಕೆರೆಗಳಿಗೆ ಎತ್ತಿನ ಹೊಳೆ ನೀರುಣಿಸುವ ಕಾಮಗಾರಿ ಬರದಿಂದ ಸಾಗಿದೆಮುಂದಿನ ಮಾರ್ಚ್‌ ವೇಳೆಗೆ ನೀರು ಹರಿಸುವ ಗುರಿಯಿದೆ. ಭೂಮಿ ಮಾಲೀಕರು ತಮ್ಮ ಭೂಮಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಭೂಮಿ ಬೆಲೆ ಏರುತ್ತಿದೆ. ಲಭ್ಯತೆ ಕಡಿಮೆಯಿದೆ ಜನಸಂಖ್ಯೆ ಹೆಚ್ಚಾಗುತ್ತಿದೆ. ಪಕ್ಷ ಭೇದವಿಲ್ಲದೆ ಮೂಲಸೌಲಭ್ಯಗಳಿಂದ ವಂಚಿತರು ಸರ್ಕಾರದ ಸೌಲಭ್ಯ ಪಡೆದು ನೆಮ್ಮದಿಯ ಜೀವನ ನಡೆಸಬೇಕು ಎಂದರು.

ಜಿ.ಪಂ.ಸಿಇಓ ಜಿ.ಪ್ರಭು ಮಾತನಾಡಿ ,ಮಧುಗಿರಿ ತಾಲೂಕು ಜಿಲ್ಲೆಯಲ್ಲೇ ನರೇಗಾ ಯೋಜನೆ ಅನುಷ್ಠಾನದಲ್ಲಿ 2ನೇ ಸ್ಥಾನದಲ್ಲಿದ್ದರೆ ಪಾವಗಡ ತಾಲೂಕು ಮೊದಲ ಸ್ಥಾನದಲ್ಲಿದೆ. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ತಾಲೂಕಿನಲ್ಲಿ 15 ಅಂಗನವಾಡಿ,30 ಶಾಲೆಗಳ ಅಭಿವೃದ್ದಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರ ಇಡೀ ರಾಜ್ಯಕ್ಕೆ ಹೊಸ 500 ಆಸ್ಪತ್ರೆ ಮಂಜೂರು ಮಾಡಿದ್ದು ಈ ಪೈಕಿ ತುಮಕೂರು ಜಿಲ್ಲೆಗೆ 130 ಬಂದಿದ್ದು ಈ ಪೈಕಿ ತಾಲೂಕಿಗೆ 26 ಆಸ್ಪತ್ರೆಗಳು ಮಂಜೂರಾಗಿವೆ. ಬಡ ಜನತೆಗೆ ತಾಲೂಕಿನಲ್ಲಿ 3 ಸಾವಿರ ನಿವೇಶನಗಳ ಹಂಚುವ ಗುರಿಯಿದೆ. ಈಗ 135 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಪ್ರತಿ ಮನೆಗೆ ಕುಡಿವ ನೀರಿನ ಮನೆ ಮನೆ ಗಂಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ 300 ಕೋಟಿ ರು.ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಪ್ರಾರಂಭವಾಗಿದೆ. ಇ ಸ್ವತ್ತು ವಿತರಣೆಯಲ್ಲಿ ಸರಳೀಕರಣಗೊಳಿಸಿದ್ದು 7 ದಿನಗಳ ಒಳಗಾಗಿ ಫಲಾನುಭವಿಗಳಿಗೆ ಇ ಸ್ವತ್ತು ಕೊಡಬೇಕು. ಜಿಲ್ಲೆಯಲ್ಲಿ 3ಲಕ್ಷಕ್ಕೂ ಹೆಚ್ಚು ಇ ಸ್ವತ್ತು ಬಾಕಿಯಿದ್ದು ಅಭಿಯಾನದಡಿ ಗುರಿ ಮುಟ್ಟಲಾಗುವುದು. ಕಂದಾಯ ಗ್ರಾಮಗಳನ್ನು ಗುರುತಿಸಿ ಇ ಖಾತೆ ನೀಡಲಾಗಿದ್ದು ಹೋಬಳಿಯ ಮುತ್ತರಾಯನಹಳ್ಲಿ ಇದಕ್ಕೆ ನಿದರ್ಶನವೆಂದರು.

ಎಸಿ ಗೋಟೂರು ಶಿವಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಡಿಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಆಂಜಿನಮ್ಮ. ಉಪಾಧ್ಯಕ್ಷೆ ಶಬೀನಾ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆದಿನಾರಾಯಣರೆಡ್ಡಿ, ಗೋಪಾಲಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶಬಾಬು, ಇಂದಿರಾ, ಸುವರ್ಣಮ್ಮ, ಜಿ.ಡಿ.ವೆಂಕಟೇಶ್‌, ತಹಸೀಲ್ದಾರ್‌ ಶ್ರೀನಿವಾಸ್‌ , ಇಒ ಲಕ್ಷ್ಮಣ್, ಬೆಸ್ಕಾಂ ಇಇ ಜಗದೀಶ್‌, ಡಿಡಿಪಿಐ ಮಾದವರೆಡ್ಡಿ. ಬಿಇಓ ಕೆ.ಎನ್‌.ಹನುಮಂತರಾಯಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು