ನರಗುಂದ: ಪ್ರತಿಯೊಂದು ಗ್ರಾಮದಲ್ಲಿನ ಸಹಕಾರಿ ಸಂಘಗಳು ಕ್ರಿಯಾಶೀಲವಾಗಿರಬೇಕು. ಅಂದಾಗ ಮಾತ್ರ ಗ್ರಾಮಗಳ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ್ ಕೊಳ್ಳಿ ಮಾತನಾಡಿ, 1925ರಲ್ಲಿ ಕಣಕಿಕೊಪ್ಪ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪನೆ ಆಗಿದೆ. ಸಂಗಮೇಶ್ವರರ ಗದ್ದುಗೆ ಆಶೀರ್ವಾದದಿಂದ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮುಂತಾದವರು ಮಾತನಾಡಿದರು. ಸಾನ್ನಿಧ್ಯವನ್ನು ಉಮೇಶ್ವರ ಶಿವಾಚಾರ್ಯ ಶ್ರೀಗಳು, ವೀರಭದ್ರ ಶಿವಾಚಾರ್ಯ ಶ್ರೀಗಳು, ಗುರುಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಶಿವಮಹಾಂತ ಶಿವಾಚಾರ್ಯ ಶ್ರೀಗಳು, ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಶಿವಕುಮಾರ ಶ್ರೀಗಳು, ಶಾಂತಲಿಂಗ ಶ್ರೀಗಳು, ಶಿವಪುತ್ರಯ್ಯ ಹಿರೇಮಠ ವಹಿಸಿದ್ದರು.ಈ ವೇಳೆ ಮೋಹನ್ ಲಿಂಬೆಕಾಯಿ, ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ವಿಜಯ ಕುಲಕರ್ಣಿ, ಎಸ್.ಡಿ.ಕೊಳ್ಳಿ ಯವರ, ಮರಿಗೌಡ ಪಾಟೀಲ, ವಿಠಲರಡ್ಡಿ ಮೂಗನೂರ, ಶಿವಪ್ಪ ಕೊಳ್ಳಿಯವರ, ಬಸಪ್ಪ ಕೊಳ್ಳಿಯವರ, ಡಾ. ಗುರಪ್ಪ ನುಗ್ಗಾನಟ್ಟಿ, ಯಲ್ಲಪ್ಪ ಕೌಜಗೇರಿ, ಶೇಖರಗೌಡ ಮುದ್ದೂರ, ಕಾಶವ್ವ ರಂಗರಡ್ಡಿಯವರ, ಕಸ್ತೂರಿ ಗಂಗನಗೌಡ್ರ, ಉಮೇಶ ಸೊಬರದ, ಬಸನಗೌಡ ಬೇಡಗೌಡ್ರ, ಹನುಮಪ್ಪ ಮಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.