ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರ ಹೇಳಿಕೆ ಗಮನಿಸಿದಾಗ ನನಗೆ ನಗು ಬರುತ್ತದೆ. ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ, ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗೆ 5 ವರ್ಷದಲ್ಲಿ ಸಂಸದ ರಾಘವೇಂದ್ರ ಏನು ಮಾಡಿದ್ದಾರೆ, ಸದನದಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಸಚಿವರು ಗೇಲಿ ಮಾಡಿದ್ದಾರೆ. ಅವರು ನನ್ನ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಹೋದರೆ ನಾನು ಮೂರು ಬಾರಿ ಸಂಸದನಾದಾಗ ಏನೇನು ಮಾಡಿದ್ದೇ ಎಂಬ ಸಂಪೂರ್ಣ ವಿವರ ಅದರಲ್ಲಿದೆ. ತೆಗೆದುಕೊಂಡು ಓದಲಿ ಎಂದು ತಿರುಗೇಟು ನೀಡಿದರು.
ನಮ್ಮ ಅವಧಿಯಲ್ಲಾದ ಅಭಿವೃದ್ಧಿ ಕೆಲಸದ ಬಗ್ಗೆ ಕರಪತ್ರದ ಮೂಲಕ ಮನೆ ಮನೆಗೆ ಈಗಾಗಲೇ ತಲುಪಿಸಲಾಗಿದೆ. ಮೊದಲು ಕಾಂಗ್ರೆಸ್ ನವರು ಅದನ್ನು ಓದಿಕೊಳ್ಳಲಿ. ಅಭಿವೃದ್ಧಿ ಕಾರ್ಯಗಳ ಬಗ್ಗೆ, ಯುವಕರಿಗಾಗಿ ಏನು ಮಾಡಿದ್ದೇನೆ ಎಂದು ಇಡೀ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತಿದೆ. ಅಭಿವೃದ್ಧಿ ಎಂದರೆ ಏನೆಂದು ಗೊತ್ತಿಲ್ಲದ ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಅವರಿಗಿಲ್ಲ ಎಂದು ತಿರುಗೇಟು ನೀಡಿದರು.ಮತದಾರರಿಂದ ಉತ್ತರ ಸಿಗಲಿದೆ:
ಹಣೆಯಲ್ಲಿ ಬರೆದಿದ್ದು ತಪ್ಪಿಸಲಾಗಲ್ಲ
ಕೆ.ಎಸ್. ಈಶ್ವರಪ್ಪ ಕೂಡ ನಾಲ್ಕೈದು ಬಾರಿ ಶಾಸಕರಾದ್ದರಿಂದ ಶಿವಮೊಗ್ಗ ನಗರದಲ್ಲಿ ಸಹಜವಾಗಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಹಾಗಾಗಿ ಅವರೊಂದಿಗೆ ಭಾಗವಹಿಸುವುದು ತಪ್ಪೇನು ಅಲ್ಲ. ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ.ಬಿ.ವೈ.ರಾಘವೇಂದ್ರ, ಸಂಸದ