ರೋಮಾಂಚನಗೊಳಿಸಿದ ಜಟ್ಟಿಗಳ ಸೆಣಸಾಟ

KannadaprabhaNewsNetwork |  
Published : Sep 09, 2025, 01:01 AM IST
ಜಂಗಿ ನಿಕಾಲಿ ಕುಸ್ತಿ ವೀಕ್ಷಿಸಿದ ಜನಸ್ತೋಮ. | Kannada Prabha

ಸಾರಾಂಶ

ಜಯಕ್ಕಾಗಿ ಜಟ್ಟಿಗಳು ಮದಗಜಗಳಂತೆ ಸೆಣಸಾಡುತ್ತಿದ್ದರೆ, ಪೈಲ್ವಾನರ ಹಾಕುತ್ತಿದ್ದ ಡಾವ್‌ಗಳಿಗೆ ನೆರೆದಿದ್ದ ಸಹಸ್ರಾರು ಪ್ರೇಕ್ಷಕರು ಸಿಳ್ಳೆ, ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಯಕ್ಕಾಗಿ ಜಟ್ಟಿಗಳು ಮದಗಜಗಳಂತೆ ಸೆಣಸಾಡುತ್ತಿದ್ದರೆ, ಪೈಲ್ವಾನರ ಹಾಕುತ್ತಿದ್ದ ಡಾವ್‌ಗಳಿಗೆ ನೆರೆದಿದ್ದ ಸಹಸ್ರಾರು ಪ್ರೇಕ್ಷಕರು ಸಿಳ್ಳೆ, ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು.

ನಗರದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯಗಳಿವು.

ಹರಿಯಾಣ ಕೇಸರಿ ವೀರೇಂದ್ರ ಪೈ ಅವರನ್ನು ಚಿತ್‌ ಮಾಡಿದ ಮಹಾರಾಷ್ಟ್ರದ ಸಿಕಂದರ್‌ ಪೈ ಶೇಖ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡರು. ದಾವಣಗೆರೆಯ ಕಾರ್ತಿಕ ಪೈ ಕಾಟೆ ಹರಿಯಾಣದ ಹರೀಶ ಕುಮಾರ ಅವರಿಗೆ ಸೋಲಿನ ರುಚಿ ತೋರಿಸಿದರು. ಕರ್ನಾಟಕ ಕಂಠೀರವ ಪೈ ಶಿವಯ್ಯ ಪೂಜಾರಿ ಮತ್ತು ಕುರುಡೆವಾಡಿಯ ಅಬುಬಕರ ಚೌಸ ನಡುವಿನ ಕುಸ್ತಿ ಸಮಬಲವಾಯಿತು. ಕೊಲ್ಲಾಪುರದ ನಾಗರಾಜ ಬಸಿಡೊನಿ ಪಂಜಾಬದ ಪ್ರದೀಪಸಿಂಗ ಪೈ ಅವರನ್ನು ಸೋಲಿಸಿ ಗೊಡಗೇರಿ ತಾಲೂಕಿನ ಪ್ರಕಾಶ ಇಂಗಳೆ ಗೆಲುವಿನ ನಗೆ ಬೀರಿದರು.

೫೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕುಸ್ತಿ ಪ್ರದರ್ಶಿಸಿದರು. ಖ್ಯಾತ ಕುಸ್ತಿ ಪಟುಗಳು ಅಕಾಡದಲ್ಲಿ ತೋಡೆ ತಟ್ಟಿ ಸೆಡ್ಡು ಹೊಡೆದು ಮದಗಜಗಳಂತೆ ಸೆಣಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರು ಸಿಳ್ಳೆ, ಕುಗಾಟ, ಜೈಕಾರ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಸಾವಿರಾರು ಜನ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಪಂದ್ಯಾವಳಿ ವೀಕ್ಷಿಸಿದರು. ಕುಸ್ತಿ ಪಂದ್ಯಾವಳಿಗೆ ಚಾಲನೆ: ಇದಕ್ಕೂ ಮುಂಚೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ,ಕ್ರೀಡೆಗಳು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ. ಅದರಲ್ಲೂ ಕುಸ್ತಿ ಸದೃಢ ವ್ಯಕ್ತಿಗಳ ಸೆನಸಾಟ. ಜನರಿಗೆ ರೋಮಾಂಚನ ನೀಡುವ ಆಟ. ಹಾಗಾಗಿ ದೇಶೀಯ ಕ್ರೀಡೆಗಳಿಗೆ ಮಹತ್ವ ನೀಡುವುದರ ಜೊತೆಗೆ ಕ್ರೀಡಾ ಪ್ರತಿಭೆಗಳನ್ನು ಹೊರ ತನ್ನಿ ಎಂದು ಹೇಳಿದರು.

ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಜಾತ್ರಾ ಕಮೀಟಿ ಅಧ್ಯಕ್ಷ ರವಿಗೌಡ ಪಾಟೀಲ, ಅಶೋಕಗೌಡ ಪಾಟೀಲ, ಸುಭಾಷ್ ಪಾಟೀಲ, ಕಾಂಗ್ರೆಸ ಮುಖಂಡ ಸಿದ್ದು ಕೊಣ್ಣೂರ, ಮುಖಂಡರಾದ ಶ್ರೀಶೈಲ ಬಜಂತ್ರಿ, ದರೇಪ್ಪ ಸಾಂಗ್ಲೀಕರ, ಎಸೈ ಶಿವಾನಂದ ಕಾರಜೋಳ ,ಶೇಖರ ಅಂಗಡಿ, ಬಸವರಾಜ ರಾಯರ, ಡಾ.ಎ.ಆರ್ ಬೆಳಗಲಿ,ಪ್ರಲ್ಹಾದ ಸಣ್ಣಕ್ಕಿ, ಬಸವರಾಜ ಚಮಕೇರಿ, ರವಿ ಜವಳಗಿ, ಶಂಕರಗೌಡ ಪಾಟೀಲ, ಚನ್ನಬಸು ಯರಗಟ್ಟಿ, ಮಾನಿಂಗಪ್ಪ ತಟ್ಟಿಮನಿ, ಅರವಿಂದ ಮಾಲಬಸರಿ,ಆನಂದ ಹಟ್ಟಿ, ಮಾನಿಂಗ ಮಾಳಿ, ಮಹಾಲಿಂಗಪ್ಪ ಜಕ್ಕಣ್ಣವರ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣಗೌಡ ಪಾಟೀಲ, ಕೀರ್ತಿ ಗಣೇಶ,ಚನ್ನಪ್ಪಣ್ಣ ಪಟ್ಟಣಶೆಟ್ಟಿ ,ನಿಂಗಪ್ಪ ಬಾಳಿಕಾಯಿ, ಚನ್ನಯ್ಯ ಚಟ್ಟಿಮಠ,ಮುದಕಪ್ಪ ಮಾಳಿ, ಬಂದು ಪಕಾಲೀ, ಅಪ್ಪಾಸಾಬ ನಾಲಬಂದ, ಶಿವಾನಂದ ಹುಣಶ್ಯಾಳ, ದುಂಡಪ್ಪ ಜಾಧವ, ಚಿದಾನಂದ ಧರ್ಮಟ್ಟಿ, ಈರಪ್ಪ ದಿನ್ನಿಮನಿ, ರಮೇಶ ಕೆಸರಗೊಪ್ಪ, ಶಿವಲಿಂಗ ಘಂಟಿ, ಮಹಾದೇವ ಮಾರಾಪುರ ಸೇರಿದಂತೆ ಇತರರಿದ್ದರು. ಶಿಕ್ಷಕ ಪರಶುರಾಮ ಆಲಗೂರ ನಿರೂಪಿಸಿ, ವಂದಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು