ಯಗಟಿ ಗ್ರಾಮದಲ್ಲಿ ಜಾನಪದ ಸಮ್ಮೇಳನ
ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ಮಸುಕಾಗುತ್ತಿದೆ ಎಂಬ ಬೇಸರ ವಿದ್ದರೂ ತಲ ತಲಾಂತರದಿಂದ ಬಂದಿರುವ ಜಾನಪದಕ್ಕೆ ಎಂದೂ ಅಳಿವಿಲ್ಲ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಮಂಗಳವಾರ ತಾಲೂಕಿನ ಯಗಟಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಾನಪದ ಎಂಬುದು ನಮ್ಮ ಗ್ರಾಮೀಣ ಬದುಕಿನ ಪ್ರತೀಕ. ಇಂದಿಗೂ ಗ್ರಾಮೀಣ ಜನರಲ್ಲಿ ಜಾನಪದ ಆಚರಣೆಗಳಿವೆ. ನಮ್ಮ ಗ್ರಾಮ ದೇವತೆಗಳು ಜಾನಪದದ ಜ್ವಲಂತ ಪ್ರತಿನಿಧಿಗಳು. ದೇವರ ಜೊತೆ ಪ್ರೀತಿಯಿಂದ ಭಾವನಾತ್ಮಕವಾಗಿ ಮಾತನಾಡುವ, ಬಯ್ಯುವ, ಛೇಡಿಸುವ ಶಕ್ತಿಯಿರುವುದು ನಮ್ಮ ಜಾನಪದರಿಗೆ ಮಾತ್ರ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ಮಸುಕಾಗುತ್ತಿದೆಯೆಂಬ ಬೇಸರ ಒಂದೆಡೆ ಇದ್ದರೂ ಜಾನಪದಕ್ಕೆ ಎಂದೂ ಅಳಿವಿಲ್ಲ ಎಂದರು.
ಪ್ರಧಾನ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಸಮಾನತೆ ಮತ್ತು ಜೀವನಾನುಭವದ ಸಂಕಲನವೇ ಜಾನಪದ. ಜಾನಪದರು ಎಲ್ಲರಿಗೂ ಒಳಿತನ್ನೆ ಬಯಸಿದರು. ಜನರು ಯಾವ ರೀತಿಯಲ್ಲಿ ಜೀವಿಸಬೇಕು, ಯಾವುದು ತಪ್ಪು, ಯಾವುದು ಸರಿ, ಸಾಮಾಜಿಕ ಜವಾಬ್ದಾರಿಗಳೇನು, ಧಾರ್ಮಿಕ, ವೈಜ್ಞಾನಿಕವಾಗಿ ಹೇಗೆ ಜೀವಿಸಬೇಕು ಎಂಬುದನ್ನು ಸಮರ್ಥವಾಗಿ ಜಾನಪದ ಸಾಹಿತ್ಯ ತಿಳಿಸುತ್ತದೆ. ಜಾನಪದ ನಮ್ಮ ತಾಯಿಬೇರು. ಅದನ್ನು ಆಳವಾಗಿ ಅಭ್ಯಾಸ ಮಾಡಿದಷ್ಟೂ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ. ಅದೊಂದು ಅನರ್ಘ್ಯ ಭಂಡಾರ ಎಂದರು.ಕಜಾಪ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ನಮ್ಮ ಗ್ರಾಮೀಣ ಜನರ ಬದುಕೇ ಜಾನಪದದಂತೆ ಮುಂದುವರಿಯುತ್ತಿದೆ. ಆದರೆ ನಶಿಸಿ ಹೋಗುತ್ತಿರುವ ನಮ್ಮ ಮೂಲ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಜಾನಪದ ಪರಿಷತ್ ಸದಾ ಕ್ರಿಯಾಶೀಲವಾಗಿರುತ್ತದೆ. ಜಾನಪದ ಉಳಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾದ್ಯ ಎಂದರು.
ಸಮ್ಮೇಳನಾಧ್ಯಕ್ಷ ಕುಂಕಾನಾಡು ಓಂಕಾರಪ್ಪನವರನ್ನು ಯಗಟಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಬಳಿ ಜಾನಪದ ಬದುಕನ್ನು ಬಿಂಬಿಸುವ ಪರಿಕರಗಳ ಪ್ರದರ್ಶನವನ್ನು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ರಾಗಿ ಕಲ್ಲು ಬೀಸುವ ಮೂಲಕ ಉದ್ಘಾಟಿಸಿದರು.
ಜಾನಪದ ನಮ್ಮೆಲ್ಲರ ಜೀವನದ ತಾಯಿಬೇರು
16ಕೆಕೆಡಿಯು1.
16ಕೆಕೆಡಿಯು1ಎ.1 ಬಿ..