ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್ಕುಮಾರ್ ಮಾತನಾಡಿ, ಸಿ.ಪಿ. ಉಮೇಶ್ ಅವರು ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆಯಲು ಪ್ರಮುಖ ಪಾತ್ರ ವಹಿಸಿದ್ದರು. ಅವರ ಅವಧಿಯಲ್ಲಿ ಬಿಜೆಪಿ ಕಟ್ಟುವಲ್ಲಿ ಅವರ ಶ್ರಮ ಮರೆಯುವಂತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳಿಂದ ಪುಳಿಯೋಗರೆ ಮತ್ತು ಸಿಹಿ ವಿತರಣೆ ಮಾಡಲಾಯಿತು. ಮುಖಂಡರಾದ ಎಚ್.ಆರ್.ಅರವಿಂದ್, ರಾಶಿ ಸಿದ್ದರಾಜುಗೌಡ, ಪ್ರಸನ್ನ, ನರಸಿಂಹಮೂರ್ತಿ, ಶಿವಕುಮಾರ್ ಇತರರು ಭಾಗವಹಿಸಿದ್ದರು.ಪ್ರೇರಣಾ ಟ್ರಸ್ಟ್ನಲ್ಲಿ ಹುಟ್ಟುಹಬ್ಬ ಆಚರಣೆ:
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮಾತನಾಡಿ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸಿ.ಪಿ.ಉಮೇಶ್ ಅವರ ಜನ್ಮದಿನದ ಅಂಗವಾಗಿ ಪ್ರೇರಣಾ ಅಂಧ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿ ಸರಳವಾಗಿ ಆಚರಿಸಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಅವರ ಅಧ್ಯಕ್ಷ ಅವಧಿಯಲ್ಲಿ ಅಭೂತಪೂರ್ವ ಬದಲಾವಣೆ ಮಾಡಿ ಹೊಸ ಅಲೆಯನ್ನು ಸೃಷ್ಟಿಸಿದರು. ದೇವರು ಅವರಿಗೆ ಇನ್ನೂ ಉನ್ನತ ಹುದ್ದೆ ಅಲಂಕರಿಸುವಂತೆ ಶುಭ ಹಾರೈಸಿದರು.
ಇಂದು ಭಾವತರಂಗ ಕನ್ನಡ ಹಳೆಯ ಸುಮಧುರ ಗೀತೆಗಳ ಕಾರ್ಯಕ್ರಮ
ಭಾವಂತರಂಗ ಕಲಾವೃಂದ ವತಿಯಿಂದ ರಂಗ ಕಲಾವಿದ, ವಿಕಲಚೇತನ ಜಿ.ಕೆ.ಶಂಕರ್ ಇವರ ವೈದ್ಯಕೀಯ ಚಿಕಿತ್ಸಾ ನೆರವಿಗಾಗಿ ಮಾ.16ರಂದು ಸಂಜೆ 5.30ಕ್ಕೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಭಾವತರಂಗ ಕನ್ನಡ ಹಳೆಯ ಸುಮಧುರ ಗೀತೆಗಳ ನೀನಾದ ಸ್ವಯಂ ನುಡಿಸುವಿಕೆಯಲ್ಲಿ (ಲೈವ್) ಕಾರ್ಯಕ್ರಮ ನಡೆಯಲಿದೆ.
ಸಹ ಪ್ರಾಧ್ಯಾಪಕ ಡಾ.ಎಂ.ಬಿ.ಪ್ರಮೀಳಾ ಶಂಕರೇಗೌಡ, ಕಸಾಪ ನಗರಾಧ್ಯಕ್ಷೆ ಸುಜಾತ ಕೃಷ್ಣ, ಪೊಲೀಸ್ ಉಪಾಧೀಕ್ಷಕರಾದ ಪಿ.ಎಂ.ಯೋಗೇಂದ್ರಕುಮಾರ್, ಬಿ.ಚಲುವರಾಜು, ಸಿಪಿಐ ಎಂ.ರಮೇಶ್, ಪಿಡಿಓ ಕೆ.ಆರ್. ಕೃಷ್ಣಪ್ಪಗೌಡ, ಗುತ್ತಿಗೆದಾರ ಕೆ.ಬಿ.ಸದಾನಂದ, ಸಾರಿಗೆ ಸಂಚಾರಿ ನಿರೀಕ್ಷಕ ಡಿ.ಜಿ. ಪುಟ್ಟರಾಜು, ಕಿರಣ್ಕುಮಾರ್, ಮನ್ಮುಲ್ ನಿರ್ದೇಶಕರಾದ ಬಿ.ಆರ್. ರಾಮಚಂದ್ರು, ಯು.ಸಿ. ಶಿವಕುಮಾರ್, ಎಂ.ಎಸ್. ರಘುನಂದನ್, ಪತ್ರಕರ್ತ ಮೋಹನ್ಕುಮಾರ್ ರಾಗಿಮುದ್ದನಹಳ್ಳಿ ಇತರರು ಅತಿಥಿಗಳಾಗಿ ಭಾಗವಹಿಸುವರು.