ನಿವೃತ್ತ ಚಾಲಕರಿಗೆ ಬೀಳ್ಕೊಡುಗೆ

KannadaprabhaNewsNetwork |  
Published : Apr 01, 2024, 12:47 AM IST
ನಿವೃತ್ತಿ ಹೊಂದಿದ  ಚಾಲಕರಿಗೆ  ಬಿಳ್ಕೊಟ್ಟ ಇಳಕಲ್  ಸಾರಿಗೆ ಘಟಕದ ಸಿಬ್ಬಂದಿಗಳು...  | Kannada Prabha

ಸಾರಾಂಶ

ಇಳಕಲ್‌ ನಗರದ ಸಾರಿಗೆ ಘಟಕದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮರೇಶ ಗುಣಸಾಗರ ಹಾಗೂ ರಮೇಶ್ ನಾಗಲಿಕ ಅವರಿಗೆ ಇಳಕಲ್ ಸಾರಿಗೆ ಘಟಕದಲ್ಲಿ ಬೀಳ್ಕೊಡಲಾಯಿತು.

ಕನ್ನಡಪ್ರಭ ವಾರ್ತೆ ಇಳಕಲ್‌ ನಗರದ ಸಾರಿಗೆ ಘಟಕದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮರೇಶ ಗುಣಸಾಗರ ಹಾಗೂ ರಮೇಶ್ ನಾಗಲಿಕ ಅವರಿಗೆ ಇಳಕಲ್ ಸಾರಿಗೆ ಘಟಕದಲ್ಲಿ ಬೀಳ್ಕೊಡಲಾಯಿತು.

ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ವೇದಿಕೆ ಇಲ್ಲದೆ ಘಟಕದ ಆವರಣದಲ್ಲಿಯೇ ಸರಳವಾಗಿ ಬೀಳ್ಕೊಡಲಾಯಿತು. ಸೇವೆಯಿಂದ ನಿವೃತ್ತಿ ಹೊಂದಿದ ಇಬ್ಬರಿಗೂ ಸಾರಿಗೆ ಘಟಕದ ವಿವಿಧ ವರ್ಗದ ಸಿಬ್ಬಂದಿ ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಬೀಳ್ಕೊಟ್ಟು, ನಿವೃತ್ತಿಯ ಜೀವನ ಸುಖಕರವಾಗಲಿ ಎಂದು ಹರಿಸಿದರು.

ಇಲಾಖೆಯ ಪರವಾಗಿ ಸಾರಿಗೆ ಘಟಕದ ವ್ಯವಸ್ಥಾಪಕ ಜಿ.ಎಸ್ ಬಿರಾದಾರ್‌ ಸತ್ಕರಿಸಿದರು. ಬಳಿಕ ಮಾತನಾಡಿದ ಅವರು, ನಿವೃತ್ತಿ ಹೊಂದಿದ ಇಬ್ಬರು ಚಾಲಕರು ತಮ್ಮ ಸೇವಾ ಅವಧಿಯಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿದ್ದಾರೆ. ಇಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರ ಜೀವನ ಸುಖಕರವಾಗಲಿ ಎಂದು ಆಶಿಸಿದರು.

ಇಲ್ಲಿಯವರೆಗೂ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಬ್ಬರು ಚಾಲಕರು ಗೆಳೆಯರ ಆತ್ಮೀಯತೆಗೆ ಭಾವುಕರಾದರು, ಇವರನ್ನು ಸನ್ಮಾನ ಮಾಡಲು ಬಂದ ಅವರ ಎಲ್ಲ ಗೆಳೆಯರ ಬಳಗದವರು ಸಹಿತ ಭಾವುಕರಾದ ಘಟನೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ