ಹೊಲದಲ್ಲಿ ಬೆಂಕಿ ಆರಿಸಲು ಹೋಗಿ ರೈತ ಸಜೀವ ದಹನ

KannadaprabhaNewsNetwork |  
Published : Dec 28, 2025, 02:15 AM IST
ಪೋಟೋ 6 : ಮೃತಪಟ್ಟ ರೈತ ಕೃಷ್ಣಪ್ಪ | Kannada Prabha

ಸಾರಾಂಶ

ಈತ ತನ್ನ ಜಮೀನಿನಲ್ಲಿ ಹೊತ್ತಿದ್ದ ಬೆಂಕಿಯನ್ನು ಕಂಡು ಆರಿಸಲು ಹೋದಾಗ ಬೆಂಕಿಯೂ ಮೈಗೆಲ್ಲಾ ಆವರಿಸಿಕೊಂಡಿದೆ.

ದಾಬಸ್‍ಪೇಟೆ: ಹೊಲದ ಬದಿಯಲ್ಲಿ ಹೊತ್ತಿದ್ದ ಬೆಂಕಿ ಆರಿಸಲು ಹೋಗಿದ್ದ ವ್ಯಕ್ತಿಗೆ ಬೆಂಕಿ ತಗುಲಿದ ಪರಿಣಾಮ ಸ್ಥಳದಲ್ಲೇ ಸಜೀವ ದಹನವಾದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದ ರೈತ ಕೃಷ್ಣಪ್ಪ (55) ಮೃತ ದುರ್ದೈವಿಯಾಗಿದ್ದು, ಈತ ತನ್ನ ಜಮೀನಿನಲ್ಲಿ ಹೊತ್ತಿದ್ದ ಬೆಂಕಿಯನ್ನು ಕಂಡು ಆರಿಸಲು ಹೋದಾಗ ಬೆಂಕಿಯೂ ಮೈಗೆಲ್ಲಾ ಆವರಿಸಿಕೊಂಡಿದೆ. ಈ ವೇಳೆ ಮೂರ್ಛೆರೋಗವೂ ಕಾಣಿಸಿಕೊಂಡ ಕಾರಣ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ